ದೊಡ್ಡಬಳ್ಳಾಪುರದ ಸಂಜಯನಗರದ ನಿವಾಸಿ ಶಿವಕುಮಾರ್ ಆಚಾರ್ ಲೋಹದ ವಿಗ್ರಹಗಳನ್ನು ಸಿದ್ದಪಡಿಸುವಲ್ಲಿ ನಿಪುಣರಾಗಿದ್ದಾರೆ. ಶಿವಕುಮಾರ್ ಆಚಾರ್ ಅವರ ನರಸಿಂಹ ವಿಗ್ರಹಕ್ಕೆ ಕಲಾಕೃತಿ ಪ್ರಶಸ್ತಿ ದೊರೆತಿದೆ. ಇವರ ನರಸಿಂಹ, ಮತ್ಸ್ಯ, ವಿಷ್ಣು, ಅಷ್ಟಲಕ್ಷ್ಮೀ, ಗಣೇಶ ಸೇರಿದಂತೆ ಹಲವು ದೇವತಾ ವಿಗ್ರಹಗಳು ರಾಜ್ಯದ ವಿವಿಧೆಡೆ ಹಾಗೂ ಬೇರೆ ರಾಜ್ಯಗಳಿಗಲ್ಲಿಯೂ ಪ್ರದರ್ಶನ ಮತ್ತು ಮಾರಾಟವಾಗಿವೆ. ಕಾವೇರಿ ಎಂಪೋರಿಯಂ ಕಲಾ ಪ್ರದರ್ಶನದಲ್ಲಿ ಇವರ ಕಲಾಕೃತಿಗಳು ಪ್ರದರ್ಶಿತವಾಗಿವೆ.