ಇತಿಹಾಸದ ಸಂಶೋಧನೆಗಳ ಪ್ರಕಾರ ಈಗಿನ ಗಾಂಧಿನಗರ ಮತ್ತು ಹಳೆ ಬಸ್ ನಿಲ್ದಾಣ ಈ ದೇವಾಲಯದ ಪ್ರಾಕಾರದಲ್ಲಿದೆ. ನಾಗರಕೆರೆ ಕೋಡಿಕಟ್ಟೆ ಮತ್ತು ಮೆಟ್ಟಿಲುಗಳಿಗೆ ಹಾಕಿರುವ ಕಲ್ಲುಗಳು, ಇಲ್ಲಿರುವ ಆಂಜನೇಯಸ್ವಾಮಿ ದೇವಾಲಯದ ಸ್ತಂಬಗಳು ಈ ದೇಗುಲ ವಿಶಾಲವಾಗಿತ್ತು ಎನ್ನುವುದಕ್ಕೆ ಪುಷ್ಟಿ ನೀಡುತ್ತದೆ. ಈಗಿರುವ ಮುಖಮಂಟಪದ ಮೇಲೆ ಯಾವುದೇ ಗೋಪುರವಿಲ್ಲ. ಆದರೆ, ಪ್ರತೋಲಿ ಎಂದು ಕರೆಯುವ ಮಂಟಪದ ವಾಸ್ತು ಶಿಲ್ಪ ವಿಶಿಷ್ಟವಾಗಿದೆ. ಲತಾಂಗನಿಯರ ಶಿಲ್ಪಕಲೆ, ಸುಂದರ ಕಂಬಗಳ ಕೆತ್ತನೆ ಕಾಣಬಹುದು.