ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳನ್ನು ಮೊದಲು ಪಟ್ಟಿ ಮಾಡಿ ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು. ಸರ್ವೋಚ್ಛ ನ್ಯಾಯಾಲಯವೇ ಆದೇಶ ನೀಡಿರುವುದರಿಂದ ಕೆಳ ಹಂತದ ನ್ಯಾಯಾಲಯ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಸಾರ್ವಜನಿಕರು ಅಕ್ಷೇಪ ಮಾಡಿದರೆ ಸಮಾಧಾನದಿಂದ ಆದೇಶವಾಗಿರುವ ಬಗ್ಗೆ ಮನವರಿಕೆ ಮಾಡಿ, ಒಪ್ಪದಿದ್ದರೆ ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಿ, ತೆರವು ಕಾರ್ಯಾಚರಣೆ ಸಮಿತಿಯಲ್ಲಿ ಪುರಸಭೆ ಮುಖ್ಯಾಧಿಕಾರಿಗಳು, ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್, ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯಿತಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಇರುತ್ತಾರೆ. ಭೂ ಮಾಪನ ಇಲಾಖೆ ಸಂಬಂಧಿಸಿದ ದೇವಾಲಯಗಳ ಜಾಗವನ್ನು ಗುರುತಿಸಬೇಕು. ತಾಲ್ಲೂಕು ಪಂಚಾಯಿತಿ ಇಲಾಖೆ ಸಹಕಾರ ನೀಡಬೇಕು ಮಾರ್ಚ್ 31ರೊಳಗೆ ತೆರವು ಕಾರ್ಯಚರಣೆತಯ ಗಡುವು ಮುಗಿಸಬೇಕು’ ಎಂದು ಹೇಳಿದರು.