ಆನೇಕಲ್ : ಟಿಪ್ಪರ್ ಲಾರಿ ಚಾಲಕನ ಅಜಾಗರೂಕತೆಯಿಂದಾಗಿ ಲಾರಿ ಹರಿದು 13 ಕುರಿಗಳು ಮೃತಪಟ್ಟಿರುವ ಘಟನೆ ಥಳೀ ರಸ್ತೆ ಚೂಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚೂಡೇನಹಳ್ಳಿ ನಾಗರಾಜು ಅವರಿಗೆ ಸೇರಿದ 13 ಕುರಿಗಳ ಮೇಲೆ ಲಾರಿ ಹರಿದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿವೆ. ಥಳೀ ರಸ್ತೆಯಿಂದ ಆನೇಕಲ್ ರಸ್ತೆ ಮಾರ್ಗದಲ್ಲಿ ಬರುತ್ತಿದ್ದ ಟಿಪ್ಪರ್ ಲಾರಿ ಚಾಲಕ, ಮೊಬೈಲ್ನಲ್ಲಿ ಮಾತನಾಡುತ್ತಾ ಏಕಾಏಕಿ ಕುರಿಗಳ ಮೇಲೆ ಲಾರಿ ಹರಿಸಿದ್ದಾರೆ.