ರೈತ ನಂಜುಂಡಪ್ಪ ಮಾತನಾಡಿ, ರೈತರ ಪರವಾಗಿದ್ದೇವೆ ಎಂದು ಹೇಳುತ್ತಿರುವ ಸರ್ಕಾರ, ರೈತರಿಗೆ ಅಗತ್ಯವಾಗಿ ಬೇಕಾಗಿರುವ ಯೂರಿಯಾ ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ರಸಗೊಬ್ಬರಗಳಿಗಾಗಿ ಪೈಪೋಟಿ ಶುರುವಾಗಿರುವುದು ಬೇಸರ ಮೂಡಿಸಿದೆ. ಖಾಸಗಿ ಅಂಗಡಿಯೊಂದಕ್ಕೆ 480 ಚೀಲ ಗೊಬ್ಬರ ಬಂದಿತ್ತು. ರೈತರು ಸರದಿಯಲ್ಲಿ ನಿಂತು ಮೊದಲು ಬಂದವರು ತಲಾ 4 ಚೀಲ ಪಡೆದುಕೊಂಡರು. ನಂತರ ಬಂದವರು ಉಳಿದವರು ಬರಿಗೈಲಿ ವಾಪಸ್ಸು ಹೋಗುವಂತಾಗಿದೆ ಎಂದರು.