ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾತಿ | ಪಟ್ಟಣಕ್ಕೆ ಬಾರದ ಗ್ರಾಹಕರು; ವ್ಯಾಪಾರಿಗಳಲ್ಲಿ ನಿರಾಶೆ

ಹಳ್ಳಿಗಳಲ್ಲಿ ಮನೆ ಬಾಗಿಲಿಗೆ ಸಂಕ್ರಾತಿ ವ್ಯಾಪಾರ
Published 13 ಜನವರಿ 2024, 15:19 IST
Last Updated 13 ಜನವರಿ 2024, 15:19 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಸುಗ್ಗಿಹಬ್ಬ ಮಕರ ಸಂಕ್ರಾಂತಿಗೆ ಅಗತ್ಯವಾಗಿ ಬೇಕಾಗಿರುವ ಕಬ್ಬು, ಗೆಣಸು, ಅವರೆಕಾಯಿ, ಕಡಲೇಕಾಯಿ, ಹೂವು, ಬಾಳೆಹಣ್ಣು ಮಾರಾಟಕ್ಕೆ ವ್ಯಾಪಾರಿಗಳು ಅಣಿಯಾಗಿದ್ದು, ಆದರೆ ನಿರೀಕ್ಷೆಯಂತೆ ಗ್ರಾಹಕರು ಬಾರದಿರುವುದು ನಿರಾಶೆ ಮೂಡಿಸಿದೆ.

ತೀವ್ರ ಮಳೆಯ ಕೊರತೆಯ ಕಾರಣದಿಂದ ಸ್ಥಳೀಯವಾಗಿ ರೈತರ ಹೊಲಗಳಲ್ಲಿ ಅವರೆಕಾಯಿ ಬೆಳೆಯದ ಕಾರಣ, ವ್ಯಾಪಾರಿಗಳು, ಚಿಂತಾಮಣಿ, ಹಾಗೂ ಚಿಕ್ಕಬಳ್ಳಾಪುರದ ಮಾರುಕಟ್ಟೆಗಳಲ್ಲಿ ಖರೀದಿ ಮಾಡಿಕೊಂಡು ಬಂದು ಮಾರಾಟ ಮಾಡುತ್ತಿದ್ದಾರೆ.

ಕಬ್ಬು ಒಂದು ಜಲ್ಲೆ ₹50, ಗೆಣಸು ಕೆ.ಜಿ. ₹50, ಕಡಲೇಕಾಯಿ ₹100, ಸಾಮ್ರಾಟ್ ಕಡಲೇಕಾಯಿ ₹120, ಅವರೆಕಾಯಿ ಒಂದೂವರೆ ಕೆ.ಜಿ. ₹100 ಗೆ ಮಾರಾಟವಾಗುತ್ತಿದ್ದು, ಭಾನುವಾರದಂದು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.

ಗುಲಾಬಿ ಹೂ ಕೆ. ಜಿ ಬೆಲೆ ₹160 ಇದ್ದದು ಈಗ ₹200, ಕನಕಾಂಬರ ₹1,200 ರೂಪಾಯಿ ಇದ್ದದ್ದು 1,500, ಕಾಕಡಾ ₹400 ರಿಂದ ₹600, ಚೆಂಡು ಹೂ ₹30 ರಿಂದ ₹60 ಸೇವಂತಿಗೆ 120 ರಿಂದ 160 ಆಗಿದೆ.

ಬಹುತೇಕ ವ್ಯಾಪಾರಿಗಳು, ಸರಕುಸಾಗಾಣಿಕೆಯ ವಾಹನಗಳನ್ನು ಸಿದ್ಧಪಡಿಸಿಕೊಂಡು, ಹಳ್ಳಿ, ಹಳ್ಳಿಗೂ ಹೋಗಿ, ಗೆಣಸು, ಕಡಲೇಕಾಯಿ, ಅವರೆಕಾಯಿ, ಕಬ್ಬು, ಹೂವು, ಹಣ್ಣುಗಳನ್ನು ಮಾರಾಟ ಮಾಡುತ್ತಿರುವ ಕಾರಣ, ಹಳ್ಳಿಗಳಿಂದ ಪಟ್ಟಣಕ್ಕೆ ಬಂದು ಖರೀದಿ ಮಾಡುತ್ತಿದ್ದ ಬಹುತೇಕ ಗ್ರಾಹಕರು ಪಟ್ಟಣಕ್ಕೆ ಬಾರದೇ ಹಳ್ಳಿಗಳಲ್ಲೆ ಖರೀದಿ ಮಾಡಿಕೊಳ್ಳುತ್ತಿದ್ದಾರೆ.

ಇದರಿಂದ ಪಟ್ಟಣದಲ್ಲಿ ವ್ಯಾಪಾರಕ್ಕಾಗಿ ಬಂಡವಾಳ ಹೂಡಿಕೆ ಮಾಡಿರುವ ವ್ಯಾಪಾರಿಗಳು, ಗ್ರಾಹಕರ ಕೊರತೆಯನ್ನು ಎದುರಿಸುತ್ತಿದ್ದು, ಹಾಕಿರುವ ಬಂಡವಾಳ ವಾಪಸ್ಸು ಬರುತ್ತೋ ಇಲ್ಲವೋ ಅನ್ನುವ ಭೀತಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT