<p>ವಿಜಯಪುರ(ದೇವನಹಳ್ಳಿ): ವಿಜಯಪುರ-ದೇವನಹಳ್ಳಿ ಮುಖ್ಯರಸ್ತೆಯ ನಡುವೆ ಇರುವ ಸಮುದಾಯ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿರುವ ತಾತ್ಕಾಲಿಕ ಶೆಡ್ನಲ್ಲಿ ನಾಲ್ಕು ಕುಟುಂಬಗಳ 30 ಮಂದಿ 30 ವರ್ಷದಿಂದ ವಾಸವಾಗಿದ್ದಾರೆ.</p>.<p>ಮನೆ ಇಲ್ಲದ ಕಾರಣ 30 ವರ್ಷದಿಂದ ಶೆಡ್ನಲ್ಲಿಯೇ ವಾಸವಾಗಿದ್ದೇವೆ. ಶೆಡ್ ಮೇಲ್ಛಾವಣಿ ಶೀಟ್ ಮಳೆ ಬಂದರೆ ಸೋರುತ್ತದೆ ಎಂದು 1ನೇ ವಾರ್ಡ್ನ ಬಸಪ್ಪನ ತೋಪಿನ ಶೆಡ್ ನಿವಾಸಿಗಳು ಹೇಳುತ್ತಾರೆ. </p>.<p>ಮಹಿಳೆಯರ ಸ್ನಾನ, ಶೌಚಕ್ಕೆ ಮನೆಯಲ್ಲಿ ಶೌಚಾಲಯ ಇಲ್ಲ. ಮನೆಗಳಿಗೆ ಬಾಗಿಲು ಇಲ್ಲ. ನೀರು ಬರಲ್ಲ. ಪುರಸಭೆಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವಾರಕ್ಕೊಮ್ಮೆ ₹600 ರೂಪಾಯಿ ಕೊಟ್ಟು ನಾಲ್ಕು ಕುಟುಂಬಗಳು ಟ್ಯಾಂಕರ್ ನೀರು ತರಿಸುತ್ತೇವೆ ಎನ್ನುತ್ತಾರೆ ಪಂಕಜ, ಶಿವಕುಮಾರ್, ಮಂಜುಳಾ, ಯಶೋಧ.</p>.<p>ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದೇವೆ. ಇದನ್ನು ಹೊರತುಪಡಿಸಿದರೆ ಬೇರೆ ಸೌಲಭ್ಯ ಸಿಕ್ಕಿಲ್ಲ ಎಂದು ಮುನಿಯಪ್ಪ ಹೇಳುತ್ತಾರೆ.</p>.<p>ಬದುಕಿರುವಾಗಲೇ ನಮಗೊಂದು ಶಾಶ್ವತ ಸೂರು ಕಲ್ಪಿಸಿ ಇದಕ್ಕಾಗಿ 40 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ </p><p>-ಅಕ್ಕಯಮ್ಮ ಸ್ಥಳೀಯ ನಿವಾಸಿ</p>.<p> <strong>ನೀರು ಪೂರೈಕೆಗೆ ಕ್ರಮ</strong> </p><p>ಇಲ್ಲಿ ವಾಸ ಮಾಡುತ್ತಿರುವ ಜನರಿಗೆ ಭೂಮಿ ಮಂಜೂರು ಮಾಡುವುದು ನಮ್ಮ ಕೆಲಸವಲ್ಲ. ಕಂದಾಯ ಇಲಾಖೆ ಕ್ರಮ ಕೈಗೊಳ್ಳಬೇಕು. ಪುರಸಭೆಯಿಂದ ಟ್ಯಾಂಕರ್ನಲ್ಲಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಶೀಘ್ರ ನೀರು ಸರಬರಾಜಿಗೆ ಪೈಪ್ಲೈನ್ ಅಳವಡಿಸಲಾಗುವುದು ಜಿ.ಆರ್.ಸಂತೋಷ್ ಪುರಸಭೆ ಮುಖ್ಯಾಧಿಕಾರಿ ವಿಜಯಪುರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ(ದೇವನಹಳ್ಳಿ): ವಿಜಯಪುರ-ದೇವನಹಳ್ಳಿ ಮುಖ್ಯರಸ್ತೆಯ ನಡುವೆ ಇರುವ ಸಮುದಾಯ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿರುವ ತಾತ್ಕಾಲಿಕ ಶೆಡ್ನಲ್ಲಿ ನಾಲ್ಕು ಕುಟುಂಬಗಳ 30 ಮಂದಿ 30 ವರ್ಷದಿಂದ ವಾಸವಾಗಿದ್ದಾರೆ.</p>.<p>ಮನೆ ಇಲ್ಲದ ಕಾರಣ 30 ವರ್ಷದಿಂದ ಶೆಡ್ನಲ್ಲಿಯೇ ವಾಸವಾಗಿದ್ದೇವೆ. ಶೆಡ್ ಮೇಲ್ಛಾವಣಿ ಶೀಟ್ ಮಳೆ ಬಂದರೆ ಸೋರುತ್ತದೆ ಎಂದು 1ನೇ ವಾರ್ಡ್ನ ಬಸಪ್ಪನ ತೋಪಿನ ಶೆಡ್ ನಿವಾಸಿಗಳು ಹೇಳುತ್ತಾರೆ. </p>.<p>ಮಹಿಳೆಯರ ಸ್ನಾನ, ಶೌಚಕ್ಕೆ ಮನೆಯಲ್ಲಿ ಶೌಚಾಲಯ ಇಲ್ಲ. ಮನೆಗಳಿಗೆ ಬಾಗಿಲು ಇಲ್ಲ. ನೀರು ಬರಲ್ಲ. ಪುರಸಭೆಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವಾರಕ್ಕೊಮ್ಮೆ ₹600 ರೂಪಾಯಿ ಕೊಟ್ಟು ನಾಲ್ಕು ಕುಟುಂಬಗಳು ಟ್ಯಾಂಕರ್ ನೀರು ತರಿಸುತ್ತೇವೆ ಎನ್ನುತ್ತಾರೆ ಪಂಕಜ, ಶಿವಕುಮಾರ್, ಮಂಜುಳಾ, ಯಶೋಧ.</p>.<p>ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದೇವೆ. ಇದನ್ನು ಹೊರತುಪಡಿಸಿದರೆ ಬೇರೆ ಸೌಲಭ್ಯ ಸಿಕ್ಕಿಲ್ಲ ಎಂದು ಮುನಿಯಪ್ಪ ಹೇಳುತ್ತಾರೆ.</p>.<p>ಬದುಕಿರುವಾಗಲೇ ನಮಗೊಂದು ಶಾಶ್ವತ ಸೂರು ಕಲ್ಪಿಸಿ ಇದಕ್ಕಾಗಿ 40 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ </p><p>-ಅಕ್ಕಯಮ್ಮ ಸ್ಥಳೀಯ ನಿವಾಸಿ</p>.<p> <strong>ನೀರು ಪೂರೈಕೆಗೆ ಕ್ರಮ</strong> </p><p>ಇಲ್ಲಿ ವಾಸ ಮಾಡುತ್ತಿರುವ ಜನರಿಗೆ ಭೂಮಿ ಮಂಜೂರು ಮಾಡುವುದು ನಮ್ಮ ಕೆಲಸವಲ್ಲ. ಕಂದಾಯ ಇಲಾಖೆ ಕ್ರಮ ಕೈಗೊಳ್ಳಬೇಕು. ಪುರಸಭೆಯಿಂದ ಟ್ಯಾಂಕರ್ನಲ್ಲಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಶೀಘ್ರ ನೀರು ಸರಬರಾಜಿಗೆ ಪೈಪ್ಲೈನ್ ಅಳವಡಿಸಲಾಗುವುದು ಜಿ.ಆರ್.ಸಂತೋಷ್ ಪುರಸಭೆ ಮುಖ್ಯಾಧಿಕಾರಿ ವಿಜಯಪುರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>