ಪ್ರತಿ ಶುಕ್ರವಾರ ಬೆಳಗ್ಗೆ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಂತೆ ನಡೆಯುತ್ತದೆ. ಆದರೆ ಇಲ್ಲಿ ಮೂಲಸೌಲಭ್ಯಗಳ ಕೊರತೆಯಿಂದ ವ್ಯಾಪಾರಿಗಳಿಗೆ ಗ್ರಾಹಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಸಮಸ್ಯೆ ಹೆಚ್ಚಾಗಿರುತ್ತದೆ. ಪುರಸಭೆ ಇತ್ತ ಗಮನಹರಿಸಿ ಸೌಲಭ್ಯ ಕಲ್ಪಿಸಬೇಕು.
ಮಣಿ ನಿಂಬೆ ಹಣ್ಣಿನ ವ್ಯಾಪಾರಿ
ಕಳೆದ ವಾರ ಸಂತೆಯ ಹೊರಗಡೆ ಸೈಕಲ್ ನಿಲ್ಲಿಸಿ ತರಕಾರಿ ದಿನಸಿ ತರುವಷ್ಟರಲ್ಲಿ ಸೈಕಲ್ ಕಳವು ಆಗಿದೆ. ಮೊಬೈಲ್ ದ್ವಿಚಕ್ರ ವಾಹನ ಕಳ್ಳರ ಸಂಖ್ಯೆ ಹೆಚ್ಚಾಗಿದೆ. ಪುರಸಭೆ ಪೊಲೀಸ್ ಇಲಾಖೆ ಜನಸಂದಣಿ ಸೇರುವ ಕಡೆ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.
ರಾಜು ಚಿಕ್ಕನಹಳ್ಳಿ ನಿವಾಸಿ
ಸಂತೆಯಲ್ಲಿ ಎಲ್ಲೆಂದರಲ್ಲಿ ಕಸ ಸುರಿಯಲಾಗುತ್ತದೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ಇದು ನಿಲ್ಲಬೇಕಾದರೆ ಪುರಸಭೆಯವರು ಸಂತೆಯ ಎರಡು ಮುಖ್ಯದ್ವಾರಗಳಿಗೆ ಗೇಟ್ ನಿರ್ಮಿಸಿ ವಿದ್ಯುತ್ ದೀಪಗಳು ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಿ. ಪ್ರದೀಪ್ ಸ್ಥಳೀಯ ನಿವಾಸಿ. ಶೀಘ್ರ ಪರಿಹಾರ ಶುಕ್ರವಾರ ಸಂತೆಯಲ್ಲಿ ಮೂಲಸೌಲಭ್ಯಗಳ ಕೊರತೆಯ ಬಗ್ಗೆ ಗಮನಕ್ಕೆ ಬಂದಿದೆ. ಪುರಸಭೆ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ವ್ಯಾಪಾರಿಗಳು ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸಲು ಪುರಸಭೆಯಿಂದ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು.