ಕಾಲೇಜಿನ ಪ್ರಾಂಶುಪಾಲ ಪ್ರೊ.ಆರ್.ಎನ್. ಪಂಚಾಕ್ಷರಯ್ಯ ಮಾತನಾಡಿ, ಪ್ರಸ್ತುತ ಕಾಲಘಟ್ಟಕ್ಕೆ ಶಿಕ್ಷಣ ಮೂಲಭೂತವಾಗಿ ಅಗತ್ಯವಿದೆ. ಸಮಾಜ ಪರವಾದ ಯಾವುದೇ ಅಂಶಗಳು ಮನುಷ್ಯನಲ್ಲಿ ಮೂಡಬೇಕಾದರೆ ಅದಕ್ಕೆ ಮುಖ್ಯ ಕಾರಣ ಶಿಕ್ಷಕನಾಗುತ್ತಾನೆ. ಅನೇಕರಿಗೆ ತಮ್ಮ ಬದುಕಿನಲ್ಲಿ ಹೀರೋ ಎನ್ನುವ ಪಾತ್ರವನ್ನು ಕೆಲವರಿಗೆ ಮಾತ್ರ ನೀಡಲಾಗುತ್ತದೆ. ಆ ವಿಚಾರದಲ್ಲಿ ವಿದ್ಯಾರ್ಥಿಗಳ ಬದುಕಿನ ಮೇಲೆ ಪ್ರಭಾವ ಬೀರುವಂತಹ ಗುರುವಿನ ಪಾತ್ರ ಮಹತ್ವದ್ದಾಗಿದೆ. ಇಂತಹ ಗುರುಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನಪರ್ಯಂತ ಹೀರೋ ಸ್ಥಾನದಲ್ಲಿಡುತ್ತಾರೆ ಎಂದು ಹೇಳಿದರು.