ನಗರ ಹಾಗೂ ಗ್ರಾಮೀಣ ಭಾಗ ಸೇರಿದಂತೆ ಎಲ್ಲಾ ಕಡೆ ಕೆರೆ,ಕುಂಟೆಗಳಲ್ಲಿ ನೀರಿನ ಸಂಗ್ರಹ ಖಾಲಿಯಾಗುತ್ತಿದ್ದಂತೆ ಪಕ್ಷಿಗಳು ಕುಡಿಯುವ ನೀರು ಇರುವ ಸ್ಥಳದತ್ತ ವಲಸೆ ಹೋಗುತ್ತಿದೆ. ಅದರಲ್ಲೂ ಗುಬ್ಬಿ, ಕಾಗೆ, ಗೊರವಂಕ, ಬುಲ್ ಬುಲ್ ಪಕ್ಷಿಗಳಂತೂ ಬೇಸಿಗೆಯಲ್ಲಿ ಕುಡಿಯುವ ನೀರಿಗಷ್ಟೇ ಅಲ್ಲದೆ ಬಿಸಿಲಿನ ವೇಳೆಯಲ್ಲಿ ಇಡೀ ದೇಹದಲ್ಲಿನ ರೆಕ್ಕೆ, ಪುಕ್ಕಗಳು ಹೊದ್ದೆಯಾಗುವಂತೆ ಮೈತೊಳೆದುಕೊಂಡರಷ್ಟೇ ಅವುಗಳಿಗೆ ಸಮಧಾನ. ಇಲ್ಲವಾದರೆ ಚಡಪಡಿಸಿ ಹೋಗುತ್ತವೆ.