ಮಾರ್ಕಂಡೇಯ ನಗರ, ಚಂದನಹೊಸೂರ, ಬೆಕ್ಕಿನಕೇರಿ, ಗೆಜಪತಿ ಮೊದಲಾದ ಗ್ರಾಮಗಳ ಜನರು ಚರ್ಚಿಸಿದರು. ‘ಹಂತ ಹಂತವಾಗಿ ಕ್ಷೇತ್ರದ ಎಲ್ಲ ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿವೆ. ಯಾವುದೇ ಕೆಲಸಗಳು ಬಾಕಿ ಉಳಿಯದಿರುವಂತೆ ನೋಡಿಕೊಳ್ಳುತ್ತಿದ್ದೇನೆ. ನನ್ನ ಗಮನಕ್ಕೆ ಬಂದ ಎಲ್ಲ ಕೆಲಸಗಳನ್ನು ಆದ್ಯತೆಯ ಮೇಲೆ ಮಾಡುತ್ತಿದ್ದೇನೆ. ತ್ವರಿತವಾಗಿ ಸ್ಪಂದಿಸುತ್ತಿದ್ದೇನೆ’ ಎಂದು ಲಕ್ಷ್ಮಿ ಹೇಳಿದರು.