ಪ್ರಾಂತ್ಯವಾರು ರಾಜ್ಯ ರಚನೆಗೂ ಮುನ್ನ 1951ರಲ್ಲಿ ಮುಂಬೈ ಪ್ರಾಂತ್ಯವಿದ್ದ ಸಂದರ್ಭದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಮೊದಲ ಸಂಸದರಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಬಲವಂತರಾವ್ ದಾತಾರ್ ಆಯ್ಕೆಯಾಗಿದ್ದರು. ಮೈಸೂರು ರಾಜ್ಯ ರಚನೆಯಾದ ನಂತರ 1957ರಲ್ಲಿ 2ನೇ ಬಾರಿಗೆ ಮತ್ತು 1962ರಲ್ಲಿ ಮೂರನೇ ಬಾರಿಗೆ ವಿಜೇತರಾಗಿದ್ದರು. ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಗಮನಸೆಳೆದಿದ್ದರು. ಅವರು ಅನಾರೋಗ್ಯದಿಂದ ನಿಧನರಾದ್ದರಿಂದ, ತೆರವಾಗಿದ್ದ ಸ್ಥಾನಕ್ಕೆ 1963ರಲ್ಕು ನಡೆದಿದ್ದ ಉಪ ಚುನಾವಣೆಯಲ್ಲಿ ಬೈಲಹೊಂಗಲದ ಎಚ್.ವಿ. ಕೌಜಲಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು 88,886 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು.