ರಾಮದುರ್ಗ: ಸ್ಥಳೀಯ ಲಯನ್ಸ್ ಸಂಸ್ಥೆ 2022-23ನೇ ಸಾಲಿನಲ್ಲಿ ಕೈಗೊಂಡ ಸಾಮಾಜಿಕ ಕಾರ್ಯಗಳನ್ನು ಗಮನಿಸಿ ಜಿಲ್ಲಾ ಲಯನ್ಸ್ ಸಂಸ್ಥೆಯಿಂದ ಮೂರು ಪ್ರಶಸ್ತಿ ಮತ್ತು ಪದಾಧಿಕಾರಿಗಳ ಕಾರ್ಯಗಳಿಗೆ 6 ಪ್ರಶಸ್ತಿ ಸೇರಿ ಒಟ್ಟು 9 ಪ್ರಶಸ್ತಿ ಲಭಿಸಿವೆ.
ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ವೆಂಕಟೇಶ ಹಿರೇರಡ್ಡಿ ಅವರಿಗೆ ಲಯನ್ಸ್ ಜಿಲ್ಲಾ ಗವರ್ನರ್ ಸುಗ್ಗಲಾ ಎಳಮಲಿ ಅವರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.
ಲಯನ್ಸ್ ಟ್ರಸ್ಟ್ ಅಧ್ಯಕ್ಷ ಬಾಬಣ್ಣ ಪತ್ತೇಪೂರ, ಅಪ್ಪು ದಿಂಡಿವಾರ, ಗೋಪಾಲ ಬಿಂದಗಿ, ಬಿ.ಎಲ್.ಸಂಕನಗೌಡ್ರ, ಎಂ.ಎಸ್. ಸಂಕನಗೌಡ್ರ, ಎ.ಜಿ. ಮಳಗಲಿ, ಲಯನ್ಸ್ ಸಂಸ್ಥೆ ಸದಸ್ಯರು ಇದ್ದರು.