<p><strong>ಹುಬ್ಬಳ್ಳಿ:</strong> ‘ಕ್ರಿಕೆಟ್ ಆಟಗಾರನಾಗಿ ಸಾಧನೆ ಮಾಡುವ ಕನಸಿತ್ತು. ಅದು ಸಾಧ್ಯವಾಗಲಿಲ್ಲ. ಈಗ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂಪೈರ್ ಆಗಿ ಅರ್ಹತೆ ಗಳಿಸಿದ್ದಕ್ಕೆ ಖುಷಿಯಾಗಿದೆ’ ಎಂದು ಹುಬ್ಬಳ್ಳಿಯ ಶ್ರೀನಾಥ ಕುಲಕರ್ಣಿ ಸಂತಸ ವ್ಯಕ್ತಪಡಿಸಿದರು.</p>.<p>ಇಲ್ಲಿನ ಸಿದ್ಧಾರೂಡ ಮಠದ ಬಳಿಯ ಶ್ರೀನಿವಾಸ ನಗರದ ಶ್ರೀನಾಥ ಅವರು, ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ವಾಸವಿದ್ದಾರೆ. ಅವರ ತಂದೆ ರೈಲ್ವೆ ಇಲಾಖೆಯ ನಿವೃತ್ತ ಉದ್ಯೋಗಿ. ತಂದೆ, ತಾಯಿ ಹುಬ್ಬಳ್ಳಿಯಲ್ಲೇ ನೆಲೆಸಿದ್ದಾರೆ.</p>.<p>‘ಅಹಮದಾಬಾದ್ನಲ್ಲಿ ಜೂನ್ನಲ್ಲಿ ಬಿಸಿಸಿಐ ಅಂಪೈರಿಂಗ್ ಪರೀಕ್ಷೆ ಬರೆದಿದ್ದೆ. ಜುಲೈ 3ರಂದು ಫಲಿತಾಂಶ ಬಂದಿದೆ. ಉತ್ತಮ ಅವಕಾಶ ಸಿಕ್ಕಿದ್ದು, ಬಿಸಿಸಿಐ ಪಂದ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ, ಕ್ರಿಕೆಟ್ಗೆ ಕೊಡುಗೆ ನೀಡಬೇಕು ಎಂಬ ಗುರಿ ಇದೆ’ ಎಂದರು. </p>.<p>ಕ್ರಿಕೆಟ್ ಆಟಗಾರನಾಗಬೇಕು ಎಂಬ ಆಸೆಯನ್ನು ತಂದೆಯ ಬಳಿ ಹೇಳಿದಾಗ ಇಲ್ಲಿನ ಹುಬ್ಬಳ್ಳಿ ಕ್ರಿಕೆಟ್ ಆಕಾಡೆಮಿಗೆ ಸೇರಿಸಿದರು. ಅಕಾಡೆಮಿಯ ವಿಜಯ್ ಕಾಮತ್ ಅವರ ಬಳಿ ತರಬೇತಿ ಪಡೆದೆ. ಬಿಡಿಕೆ ಸ್ಪೋರ್ಟ್ಸ್ ಕ್ಲಬ್ ಪರವೂ ಆಡಿದ್ದೆನೆ ಎಂದರು.</p>.<p>ಎಂಜಿನಿಯರಿಂಗ್ ಮುಗಿದ ನಂತರ ಕ್ರಿಕೆಟ್ ಮುಂದುವರಿಸಲು ಆಗಲಿಲ್ಲ. ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದೆ. ನಂತರ 2014ರಲ್ಲಿ ಕೆಎಸ್ಸಿಎ ಅಂಪೈರ್ ಆಗಿ ಆಯ್ಕೆಯಾದೆ. ಉದ್ಯೋಗದ ಜತೆಗೆ ಅಂಪೈರಿಂಗ್ ಸಹ ಮಾಡುತ್ತಿದ್ದೆ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ‘ಕ್ರಿಕೆಟ್ ಆಟಗಾರನಾಗಿ ಸಾಧನೆ ಮಾಡುವ ಕನಸಿತ್ತು. ಅದು ಸಾಧ್ಯವಾಗಲಿಲ್ಲ. ಈಗ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂಪೈರ್ ಆಗಿ ಅರ್ಹತೆ ಗಳಿಸಿದ್ದಕ್ಕೆ ಖುಷಿಯಾಗಿದೆ’ ಎಂದು ಹುಬ್ಬಳ್ಳಿಯ ಶ್ರೀನಾಥ ಕುಲಕರ್ಣಿ ಸಂತಸ ವ್ಯಕ್ತಪಡಿಸಿದರು.</p>.<p>ಇಲ್ಲಿನ ಸಿದ್ಧಾರೂಡ ಮಠದ ಬಳಿಯ ಶ್ರೀನಿವಾಸ ನಗರದ ಶ್ರೀನಾಥ ಅವರು, ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ವಾಸವಿದ್ದಾರೆ. ಅವರ ತಂದೆ ರೈಲ್ವೆ ಇಲಾಖೆಯ ನಿವೃತ್ತ ಉದ್ಯೋಗಿ. ತಂದೆ, ತಾಯಿ ಹುಬ್ಬಳ್ಳಿಯಲ್ಲೇ ನೆಲೆಸಿದ್ದಾರೆ.</p>.<p>‘ಅಹಮದಾಬಾದ್ನಲ್ಲಿ ಜೂನ್ನಲ್ಲಿ ಬಿಸಿಸಿಐ ಅಂಪೈರಿಂಗ್ ಪರೀಕ್ಷೆ ಬರೆದಿದ್ದೆ. ಜುಲೈ 3ರಂದು ಫಲಿತಾಂಶ ಬಂದಿದೆ. ಉತ್ತಮ ಅವಕಾಶ ಸಿಕ್ಕಿದ್ದು, ಬಿಸಿಸಿಐ ಪಂದ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ, ಕ್ರಿಕೆಟ್ಗೆ ಕೊಡುಗೆ ನೀಡಬೇಕು ಎಂಬ ಗುರಿ ಇದೆ’ ಎಂದರು. </p>.<p>ಕ್ರಿಕೆಟ್ ಆಟಗಾರನಾಗಬೇಕು ಎಂಬ ಆಸೆಯನ್ನು ತಂದೆಯ ಬಳಿ ಹೇಳಿದಾಗ ಇಲ್ಲಿನ ಹುಬ್ಬಳ್ಳಿ ಕ್ರಿಕೆಟ್ ಆಕಾಡೆಮಿಗೆ ಸೇರಿಸಿದರು. ಅಕಾಡೆಮಿಯ ವಿಜಯ್ ಕಾಮತ್ ಅವರ ಬಳಿ ತರಬೇತಿ ಪಡೆದೆ. ಬಿಡಿಕೆ ಸ್ಪೋರ್ಟ್ಸ್ ಕ್ಲಬ್ ಪರವೂ ಆಡಿದ್ದೆನೆ ಎಂದರು.</p>.<p>ಎಂಜಿನಿಯರಿಂಗ್ ಮುಗಿದ ನಂತರ ಕ್ರಿಕೆಟ್ ಮುಂದುವರಿಸಲು ಆಗಲಿಲ್ಲ. ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದೆ. ನಂತರ 2014ರಲ್ಲಿ ಕೆಎಸ್ಸಿಎ ಅಂಪೈರ್ ಆಗಿ ಆಯ್ಕೆಯಾದೆ. ಉದ್ಯೋಗದ ಜತೆಗೆ ಅಂಪೈರಿಂಗ್ ಸಹ ಮಾಡುತ್ತಿದ್ದೆ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>