ಆಗ ಬಸವರಾಜ ಬೊಮ್ಮಾಯಿ ವಿರೋಧ ಪಕ್ಷದಲ್ಲಿದ್ದರೂ ಕಡ್ಲೆಪುರಿ ತಿನ್ನುತ್ತಿದ್ದರಾ? ಎಂಬ ಸಿದ್ದರಾಮ್ಯಯ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ, ‘ವಿರೋಧ ಪಕ್ಷದ ಜವಾಬ್ದಾರಿಯಿಂದ ನಾವು ಸಾಕಷ್ಟು ಪ್ರಶ್ನೆ ಮಾಡಿದ್ದೇವೆ. ಆದರೆ, ಸಿದ್ದರಾಮಯ್ಯ ಅವರೇ ಎಲ್ಲವನ್ನೂ ಮುಚ್ಚಿಹಾಕಿದರು. ಒಂದು ವೇಳೆ ನಾವು ಕೇಳದೇ ಇದ್ದರೂ ತನಿಖೆ ಮಾಡಿಸಬೇಕಾದುದು ಸಿದ್ದರಾಮಯ್ಯ ಅವರ ಜವಾಬ್ದಾರಿ ಆಗಿರಲಿಲ್ಲವೇ’ ಎಂದು ಖಾರವಾಗಿ ಉತ್ತರಿಸಿದರು.