‘ವಾತಾವರಣದ ಶುದ್ಧಿಗೆ ಅಗ್ನಿಹೋತ್ರ ಚಟುವಟಿಕೆ ಸಹಕಾರಿಯಾಗಿದೆ. ಇದು ದೇಶದ ಪ್ರಾಚೀನ ಸಂಪ್ರದಾಯವಾಗಿದೆ. ಅಧಿಕಾರಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿನಾಯಕ ಲೋಕೂರ ತಂಡದವರು ಪಾಲ್ಗೊಂಡಿದ್ದರು. ಮುಂದೆಯೂ ಆಗಾಗ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ವಿಡಿಯೊದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ನಿರ್ದೇಶಕ ರಾಜೇಶ್ಕುಮಾರ್ ಮೌರ್ಯ, 'ಆ ಕಾರ್ಯಕ್ರಮ ವೈಯಕ್ತಿಕ ಹಿತಾಸಕ್ತಿಯದ್ದೇನಲ್ಲ. ವಿಮಾನನಿಲ್ದಾಣ ಪ್ರಾಧಿಕಾರದಿಂದ ನಿರ್ದೇಶನವೂ ಇರಲಿಲ್ಲ. ಅಗ್ನಿಹೋತ್ರದಿಂದ ವಾತಾವರಣ ಶುದ್ಧಿಯಾಗುತ್ತದೆ ಎನ್ನುವುದು ವೈಜ್ಞಾನಿಕವಾಗಿ ರುಜುವಾತಾಗಿದೆ. ಹೀಗಾಗಿ, ನಮ್ಮ ಸಂಪ್ರದಾಯವೂ ಆಗಿರುವ ಅ ಕಾರ್ಯಕ್ರಮವನ್ನು ಸದುದ್ದೇಶದಿಂದ ನಡೆಸಿದ್ದೇವೆ. ಸ್ಥಳೀಯರನ್ನು ಒಳಗೊಳ್ಳುವ ಚಟುವಟಿಕೆಯ ಭಾಗವಾಗಿಯೂ ಮಾಡಿದ್ದೇವೆ' ಎಂದು ತಿಳಿಸಿದರು.