<p><strong>ಬೆಳಗಾವಿ: </strong>ಇಲ್ಲಿನ ಎನ್ಸಿಸಿ ನಿರ್ದೇಶನಾಲಯ (ಕರ್ನಾಟಕ ಹಾಗೂ ಗೋವಾ)ದಿಂದ ಡಿ. 21ರವರೆಗೆ ಹಮ್ಮಿಕೊಂಡಿರುವ ಅಖಿಲ ಭಾರತ ಎನ್ಸಿಸಿ ಟ್ರೆಕ್ಕಿಂಗ್ ಶಿಬಿರ ‘ಬೆಳಗಾವಿ ಟ್ರೆಕ್–2019’ ಭಾನುವಾರ ಆರಂಭಗೊಂಡಿತು.</p>.<p>ಬೆಳಗುಂದಿ– ಹಂಗರಗಾ, ಬಸುರ್ತೆ– ವೈಜನಾಥ ದೇವಸ್ಥಾನದವರೆಗೆ ನಡೆದ ಮೊದಲ ಚಾರಣಕ್ಕೆ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಚಾಲನೆ ನೀಡಿದರು. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಗೋವಾ ಸೇರಿದಂತೆ 12 ರಾಜ್ಯಗಳ ಹಾಗೂ 7 ಎನ್ಸಿಸಿ ನಿರ್ದೇಶನಾಲಯಗಳ 500 ಕೆಡೆಟ್ಗಳು ಪಾಲ್ಗೊಂಡಿದ್ದಾರೆ.</p>.<p>ಬೆಳಗುಂದಿ ಹಾಗೂ ಮಹಿಪಾಲಗಡ ಪ್ರದೇಶದಲ್ಲಿ ಚಾರಣ ನಡೆಯಲಿದೆ. ಕೆಡೆಟ್ಗಳು ಎಂಎಲ್ಐಆರ್ಸಿ ಕಾಮಾಂಡೊ ವಿಂಗ್ಗೆ ಭೇಟಿ ನೀಡಲಿದ್ದಾರೆ. ಅಧ್ಯಯನ ಪ್ರವಾಸಕ್ಕಾಗಿ ಗೋಕಾಕ ಹಾಗೂ ಚನ್ನಮ್ಮನಕಿತ್ತೂರಿಗೆ ತೆರಳಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ.</p>.<p>ಕರ್ನಲ್ ಎ.ಕೆ. ವರ್ಮ, ಲೆಫ್ಟಿನೆಂಟ್ ಕರ್ನಲ್ ಬಾಲಕೃಷ್ಣ ಎಸ್., ಬೆಳಗಾವಿ ಎನ್ಸಿಸಿ ಗ್ರೂಪ್ ಕೇಂದ್ರಸ್ಥಾನದ ಗ್ರೂಪ್ ಕಮಾಂಡರ್ ಕರ್ನಲ್ ಜೆ.ಜೆ. ಅಬ್ರಾಹಂ ಮತ್ತು ಸೂಪರಿಂಟೆಂಡೆಂಟ್ ಸಿ. ಸುಭಾಷ್ಚಂದ್ರ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>ಇಲ್ಲಿನ ಎನ್ಸಿಸಿ ನಿರ್ದೇಶನಾಲಯ (ಕರ್ನಾಟಕ ಹಾಗೂ ಗೋವಾ)ದಿಂದ ಡಿ. 21ರವರೆಗೆ ಹಮ್ಮಿಕೊಂಡಿರುವ ಅಖಿಲ ಭಾರತ ಎನ್ಸಿಸಿ ಟ್ರೆಕ್ಕಿಂಗ್ ಶಿಬಿರ ‘ಬೆಳಗಾವಿ ಟ್ರೆಕ್–2019’ ಭಾನುವಾರ ಆರಂಭಗೊಂಡಿತು.</p>.<p>ಬೆಳಗುಂದಿ– ಹಂಗರಗಾ, ಬಸುರ್ತೆ– ವೈಜನಾಥ ದೇವಸ್ಥಾನದವರೆಗೆ ನಡೆದ ಮೊದಲ ಚಾರಣಕ್ಕೆ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಚಾಲನೆ ನೀಡಿದರು. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಗೋವಾ ಸೇರಿದಂತೆ 12 ರಾಜ್ಯಗಳ ಹಾಗೂ 7 ಎನ್ಸಿಸಿ ನಿರ್ದೇಶನಾಲಯಗಳ 500 ಕೆಡೆಟ್ಗಳು ಪಾಲ್ಗೊಂಡಿದ್ದಾರೆ.</p>.<p>ಬೆಳಗುಂದಿ ಹಾಗೂ ಮಹಿಪಾಲಗಡ ಪ್ರದೇಶದಲ್ಲಿ ಚಾರಣ ನಡೆಯಲಿದೆ. ಕೆಡೆಟ್ಗಳು ಎಂಎಲ್ಐಆರ್ಸಿ ಕಾಮಾಂಡೊ ವಿಂಗ್ಗೆ ಭೇಟಿ ನೀಡಲಿದ್ದಾರೆ. ಅಧ್ಯಯನ ಪ್ರವಾಸಕ್ಕಾಗಿ ಗೋಕಾಕ ಹಾಗೂ ಚನ್ನಮ್ಮನಕಿತ್ತೂರಿಗೆ ತೆರಳಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ.</p>.<p>ಕರ್ನಲ್ ಎ.ಕೆ. ವರ್ಮ, ಲೆಫ್ಟಿನೆಂಟ್ ಕರ್ನಲ್ ಬಾಲಕೃಷ್ಣ ಎಸ್., ಬೆಳಗಾವಿ ಎನ್ಸಿಸಿ ಗ್ರೂಪ್ ಕೇಂದ್ರಸ್ಥಾನದ ಗ್ರೂಪ್ ಕಮಾಂಡರ್ ಕರ್ನಲ್ ಜೆ.ಜೆ. ಅಬ್ರಾಹಂ ಮತ್ತು ಸೂಪರಿಂಟೆಂಡೆಂಟ್ ಸಿ. ಸುಭಾಷ್ಚಂದ್ರ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>