ಬೆಳಗಾವಿ: ‘ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕಿದೆ. ಕೆರೆಗಳೇ ಇಲ್ಲದಿದ್ದರೆ ಜೀವಸಂಕುಲ ನಾಶವಾಗಲಿದೆ. ಕೆರೆಗಳ ನಿರ್ಮಾಣದಿಂದ ಜೀವಸಂಕುಲಕ್ಕೆ ಆಸರೆಯಾಗಲಿದೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಘಟಕದ ನಿರ್ದೇಶಕ ಸತೀಶ ನಾಯಕ ಹೇಳಿದರು.
ತಾಲ್ಲೂಕಿನ ಹೊನಗಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಾಸರವಾಡಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರದಿಂದ ಹೂಳೆತ್ತಿದ ಕೆರೆಗೆ ಬಾಗಿನ ಅರ್ಪಣೆ ಹಾಗೂ ನಿರ್ವಹಣೆಗಾಗಿ ಪಂಚಾಯ್ತಿಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೀಜಾಬಾಯಿ ದುಡುಮ್, ಕೆರೆ ಸಮಿತಿ ಅಧ್ಯಕ್ಷ ನಾಗರಾಜ ಪಾಟೀಲ, ನಾಗರಾಜ್ ಹದ್ಲಿ, ದೀಪಾ ಪಾಟೀಲ, ಆನಂದ ಪಾಟೀಲ, ಕಿರಣ ಪಾಟೀಲ, ಬಸು ನಾಯಕ್, ವಿಜಯ ಸುತಾರ, ಸಂತೋಷ ಪಾಟೀಲ, ಮಹಾಬಳೇಶ್ವರ ಪಟಗಾರ ಇದ್ದರು.