<p><strong>ಹುಕ್ಕೇರಿ:</strong> ಸ್ಥಳೀಯ ವಕೀಲರ ಸಂಘಕ್ಕೆ ಗುರುವಾರ ಜರುಗಿದ ತುರುಸಿನ ಸ್ಪರ್ಧೆಯಲ್ಲಿ ಎರಡು ಬಣಗಳ ಸಮಬಲದ ಹೋರಾಟದ ಫಲಿತಾಂಶ ತಡರಾತ್ರಿ ಹೊರಬಿತ್ತು.</p>.<p>ಅಧ್ಯಕ್ಷರ ಸ್ಥಾನದ ಆಕಾಂಕ್ಷಿಗಳಾಗಿದ್ದ ಅನ್ನೀಸ್ ವಂಟಮೂರಿ ಮತ್ತು ಕಾಡಪ್ಪ ಕುಡಬೇಟ ಸಮಬಲದ ಹೋರಾಟ ನಡೆಸಿದರು.</p>.<p>ನಂತರ ಒಮ್ಮತಕ್ಕೆ ಬಂದ ಇಬ್ಬರೂ, ಎರಡು ವರ್ಷದ ಅವಧಿಯಲ್ಲಿ ಮೊದಲ ಅವಧಿಗೆ ಅನ್ನೀಸ್ ವಂಟಮೂರಿ, ನಂತರದ ಅವಧಿಗೆ ಕಾಡಪ್ಪ ಕುರಬೇಟ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ನಿರ್ಧಿರಿಸಿದರು.</p>.<p><strong>ಪದಾಧಿಕಾರಿಗಳು:</strong> ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ ಜಿನರಾಳಿ, ಕಾರ್ಯದರ್ಶಿಯಾಗಿ ಶೌಕತ್ ಅಲಿ ನದಾಫ್, ಸಹ ಕಾರ್ಯದರ್ಶಿಯಾಗಿ ವಿಠ್ಠಲ್ ಘಸ್ತಿ, ಖಜಾಂಚಿಯಾಗಿ ಅಂಬರೀಶ್ ಬಾಗೇವಾಡಿ ಮತ್ತು ಮಹಿಳಾ ಪ್ರತಿನಿಧಿಯಾಗಿ ಅನಿತಾ ಕುಲಕರ್ಣಿ ಆಯ್ಕೆಯಾದರು.</p>.<p>ಹಿರಿಯ ವಕೀಲ ಅಶೋಕ ಹುಲ್ಲೋಳಿ ಚುನಾವಣಾಧಿಕಾರಿಯಾಗಿ ಮತ್ತು ಪಿ.ಎಸ್.ಪಾಟೀಲ ಎಆರ್ಒ ಆಗಿ ಕಾರ್ಯನಿರ್ವಹಿಸಿದರು.</p>.<p>200 ಸದಸ್ಯರ ಪೈಕಿ 192 ಸದಸ್ಯರು ಮತ ಚಲಾಯಿಸಿದರು. ಅದರಲ್ಲಿ ಒಂದು ಮತ ಅಮಾನ್ಯವಾಗಿತ್ತು.</p>.<p>ಅನ್ನೀಸ್ ವಂಟಮೂರಿ ಮಾತನಾಡಿ, ‘ಕ್ಯಾರಗುಡ್ಡ ಬಳಿ ಮಂಜೂರಾದ 5 ಎಕರೆ ಜಮೀನಿನಲ್ಲಿ ನೂತನ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ, ನೂತನ ವಕೀಲರಿಗೆ ವ್ಯಕ್ತಿತ್ವ ವಿಕಸನ, ನೈಪುಣ್ಯತೆ ಹೆಚ್ಚಿಸುವ ಕಾರ್ಯಾಗಾರ ಮತ್ತು ಗ್ರಂಥಾಲಯ ಸುಧಾರಣೆಗೆ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.</p>.<p>ವಕೀಲರಾದ ಕೆ.ಎಲ್.ಜಿನರಾಳಿ, ಡಿ.ಕೆ.ಅವರಗೋಳ, ಬಿ.ಕೆ.ಮಗೆನ್ನವರ, ನಿರ್ಗಮಿತ ಅಧ್ಯಕ್ಷ ರಾಜು ಚೌಗಲಾ ಇದ್ದರು.</p>.<p><strong>ವಿಜಯೋತ್ಸವ:</strong> ಫಲಿತಾಂಶ ಘೋಷಣೆಯಾದ ಬಳಿಕ ವಿಜೇತ ವಕೀಲರ ಬೆಂಬಲಿಗರು ಕೋರ್ಟ್ ಸರ್ಕಲ್ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಕ್ಕೇರಿ:</strong> ಸ್ಥಳೀಯ ವಕೀಲರ ಸಂಘಕ್ಕೆ ಗುರುವಾರ ಜರುಗಿದ ತುರುಸಿನ ಸ್ಪರ್ಧೆಯಲ್ಲಿ ಎರಡು ಬಣಗಳ ಸಮಬಲದ ಹೋರಾಟದ ಫಲಿತಾಂಶ ತಡರಾತ್ರಿ ಹೊರಬಿತ್ತು.</p>.<p>ಅಧ್ಯಕ್ಷರ ಸ್ಥಾನದ ಆಕಾಂಕ್ಷಿಗಳಾಗಿದ್ದ ಅನ್ನೀಸ್ ವಂಟಮೂರಿ ಮತ್ತು ಕಾಡಪ್ಪ ಕುಡಬೇಟ ಸಮಬಲದ ಹೋರಾಟ ನಡೆಸಿದರು.</p>.<p>ನಂತರ ಒಮ್ಮತಕ್ಕೆ ಬಂದ ಇಬ್ಬರೂ, ಎರಡು ವರ್ಷದ ಅವಧಿಯಲ್ಲಿ ಮೊದಲ ಅವಧಿಗೆ ಅನ್ನೀಸ್ ವಂಟಮೂರಿ, ನಂತರದ ಅವಧಿಗೆ ಕಾಡಪ್ಪ ಕುರಬೇಟ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ನಿರ್ಧಿರಿಸಿದರು.</p>.<p><strong>ಪದಾಧಿಕಾರಿಗಳು:</strong> ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ ಜಿನರಾಳಿ, ಕಾರ್ಯದರ್ಶಿಯಾಗಿ ಶೌಕತ್ ಅಲಿ ನದಾಫ್, ಸಹ ಕಾರ್ಯದರ್ಶಿಯಾಗಿ ವಿಠ್ಠಲ್ ಘಸ್ತಿ, ಖಜಾಂಚಿಯಾಗಿ ಅಂಬರೀಶ್ ಬಾಗೇವಾಡಿ ಮತ್ತು ಮಹಿಳಾ ಪ್ರತಿನಿಧಿಯಾಗಿ ಅನಿತಾ ಕುಲಕರ್ಣಿ ಆಯ್ಕೆಯಾದರು.</p>.<p>ಹಿರಿಯ ವಕೀಲ ಅಶೋಕ ಹುಲ್ಲೋಳಿ ಚುನಾವಣಾಧಿಕಾರಿಯಾಗಿ ಮತ್ತು ಪಿ.ಎಸ್.ಪಾಟೀಲ ಎಆರ್ಒ ಆಗಿ ಕಾರ್ಯನಿರ್ವಹಿಸಿದರು.</p>.<p>200 ಸದಸ್ಯರ ಪೈಕಿ 192 ಸದಸ್ಯರು ಮತ ಚಲಾಯಿಸಿದರು. ಅದರಲ್ಲಿ ಒಂದು ಮತ ಅಮಾನ್ಯವಾಗಿತ್ತು.</p>.<p>ಅನ್ನೀಸ್ ವಂಟಮೂರಿ ಮಾತನಾಡಿ, ‘ಕ್ಯಾರಗುಡ್ಡ ಬಳಿ ಮಂಜೂರಾದ 5 ಎಕರೆ ಜಮೀನಿನಲ್ಲಿ ನೂತನ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ, ನೂತನ ವಕೀಲರಿಗೆ ವ್ಯಕ್ತಿತ್ವ ವಿಕಸನ, ನೈಪುಣ್ಯತೆ ಹೆಚ್ಚಿಸುವ ಕಾರ್ಯಾಗಾರ ಮತ್ತು ಗ್ರಂಥಾಲಯ ಸುಧಾರಣೆಗೆ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.</p>.<p>ವಕೀಲರಾದ ಕೆ.ಎಲ್.ಜಿನರಾಳಿ, ಡಿ.ಕೆ.ಅವರಗೋಳ, ಬಿ.ಕೆ.ಮಗೆನ್ನವರ, ನಿರ್ಗಮಿತ ಅಧ್ಯಕ್ಷ ರಾಜು ಚೌಗಲಾ ಇದ್ದರು.</p>.<p><strong>ವಿಜಯೋತ್ಸವ:</strong> ಫಲಿತಾಂಶ ಘೋಷಣೆಯಾದ ಬಳಿಕ ವಿಜೇತ ವಕೀಲರ ಬೆಂಬಲಿಗರು ಕೋರ್ಟ್ ಸರ್ಕಲ್ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>