‘ದಹಲಿ-ಬೆಳಗಾವಿ ನಡುವೆ ವಿಮಾನಯಾನ ಸೇವೆ ಪ್ರಾರಂಭ ಆಗಬೇಕು ಎನ್ನುವುದು ಇಲ್ಲಿನ ಜನರ ಬಯಕೆಯಾಗಿತ್ತು. ಅದರಂತೆ, ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅವರು ಆಗಿನ ವಿಮಾನಯಾನ ಸಚಿವ ಹರದೀಪ್ಸಿಂಗ್ ಪುರಿ ಅವರನ್ನು ಒತ್ತಾಯಿಸಿದ್ದರು. ಆ ಕನಸು ಈಗ ನನಸಾಗಿದೆ. ಇದರೊಂದಿಗೆ ಈ ನಿಲ್ದಾಣವು ಸಧ್ಯ 12 ದೊಡ್ಡ ನಗರಗಳೊಂದಿಗೆ ನೇರ ವಿಮಾನಯಾನ ಸಂಪರ್ಕ ಹೊಂದಿದಂತಾಗಿದೆ’ ಎಂದು ಸಂಸದೆ ಮಂಗಲಾ ಸುರೇಶ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.