9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಗಂಗಾ, ಯಮುನಾ, ಕೃಷ್ಣಾ ಮತ್ತು ಕಾವೇರಿ ಎಂಬ ನಾಲ್ಕು ಸದನಗಳನ್ನು ತಯಾರು ಮಾಡಲಾಗಿತ್ತು. ಬ್ಯಾಂಡ್ ಮೇಳದಲ್ಲಿಯೂ ತಮ್ಮತಮ್ಮ ತಂಡಗಳನ್ನು ಪ್ರತಿನಿಧಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಟಗಳಲ್ಲೂ ಸಾಮರ್ಥ್ಯ ಪ್ರದರ್ಶಿಸಿ ಸೈ ಎಣಿಸಿಕೊಂಡರು. ಚಿಣ್ಣರು ಕಪ್ಪೆ ಜಿಗಿತ, ಬಲೂನು ಒಡೆಯುವುದು, ಗೋಣಿಚೀಲದ ಓಟಗಳಲ್ಲಿ ಮಿಂಚಿದರು.