‘ಮಹಾದೇವಿ ಅವರ ಬಸವ ಸೇವೆ ಅನನ್ಯ. ಬಸವಣ್ಣನವರ ಸಾಧನೆ, ಸಾಹಿತ್ಯ ಮತ್ತು ಸಂದೇಶಗಳನ್ನು ಸಂಗೀತ, ಸಾಹಿತ್ಯ, ಸಿನಿಮಾ, ನಾಟಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ವೈಚಾರಿಕವಾಗಿ ಸಾರುತ್ತಾ ಸ್ಮರಣೀಯ ಸೇವೆ ಮಾಡಿ ಅಮರರಾಗಿದ್ದಾರೆ. ಸ್ವತಂತ್ರ ಲಿಂಗಾಯತ ಧರ್ಮ ಹೋರಾಟಕ್ಕೆ ತಾರ್ಕಿಕ ಮತ್ತು ಸಾಮಾಜಿಕ ನೆಲೆ ಒದಗಿಸಿ, ದಿಟ್ಟ ವೈಚಾರಿಕ ನೆಲೆಯಲ್ಲಿ ಹೋರಾಟದ ಕಿಚ್ಚು ಹಚ್ಚಿದವರು. ಧೈರ್ಯ, ಛಲಗಳನ್ನು ತುಂಬಿದ ಮಹಾನ್ ಬಸವ ಭಾವದ ಮಹಾನ್ ಚೇತನ. ವಿಶ್ವಗುರು ಬಸವಣ್ಣ ಸಂಸ್ಥಾಪಿಸಿದ ವಿಶಿಷ್ಟ ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಯೇ ಪಡೆಯುವುದೇ ಅವರಿಗೆ ಅರ್ಪಿಸುವ ದೊಡ್ಡ ಶ್ರದ್ಧಾಂಜಲಿ’ ಎಂದು ತಿಳಿಸಿದರು.