<p><strong>ಬೆಳಗಾವಿ:</strong> ‘ಸಮಾಜ ನಿರ್ಮಾಣದಲ್ಲಿ ಎಲ್ಲ ವರ್ಗಗಳು ಜನರಷ್ಟೇ; ಸ್ವಚ್ಛತಾ ಕಾರ್ಮಿಕರ ಪಾತ್ರವೂ ಅತ್ಯಂತ ಮಹತ್ವದ್ದು’ ಎಂದು ಮೇಯರ್ ಮಂಗೇಶ ಪವಾರ್ ಹೇಳಿದರು.</p>.<p>ವೇದಾಂತ ಫೌಂಡೇಶನ್ ಶನಿವಾರ ಆಯೋಜಿಸಿದ್ದ ಶಿಕ್ಷಕರು, ಪತ್ರಕರ್ತರು, ಪೊಲೀಸರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದ ಅವರು, ‘ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುತ್ತಾರೆ. ಪತ್ರಕರ್ತರು ಸಮಾಜದ ಕಣ್ಣಾಗಿದ್ದಾರೆ. ಪೊಲೀಸರು ಶಾಂತಿ, ಕಾನೂನು ಕಾಪಾಡುತ್ತಾರೆ. ಆದರೆ ಈ ಎಲ್ಲರ ಜೊತೆಗೆ ನಗರವನ್ನು ಸ್ವಚ್ಛವಾಗಿ ಇಡುವ ಸ್ವಚ್ಛತಾ ಕಾರ್ಮಿಕರು ಕೂಡ ಸಮಾಜದ ನಿಜವಾದ ಹೀರೋಗಳು’ ಎಂದರು.</p>.<p>ಉಪಮೇಯರ್ ವಾಣಿ ಜೋಶಿ ಮಾತನಾಡಿ, ‘ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡಲು ಎಲ್ಲರ ಸಹಕಾರ ಅಗತ್ಯ’ ಎಂದು ತಿಳಿಸಿದರು.</p>.<p>‘ಫಾಸ್ಟ್ ಫುಡ್ ಸಂಸ್ಕೃತಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದರಿಂದ ಜನರು ಆರೋಗ್ಯದ ಬಗ್ಗೆ ಎಚ್ಚರವಾಗಿರಬೇಕು’ ಎಂದರು.</p>.<p>ಡಿಸಿಪಿ ನಿರಂಜನರಾಜೆ ಅರಸ್, ಉದ್ಯಮಿ ಆರ್.ವೈ. ಪಾಟೀಲ, ಅಶೋಕ್ ನಾಯಕ್, ಸಂತೋಷ್ ಜೈನೋಜಿ, ಲಿಂಗರಾಜ್ ಜಗಜಂಪಿ, ವೀರೇಶ್ ಕಿವಡಸಣ್ಣವರ ಮತ್ತಿತರರು ಮಾತನಾಡಿದರು.</p>.<p>ಅಧ್ಯಕ್ಷ ಆರ್.ಎಂ. ಚೌಗಲೆ ಅವರು, ಉತ್ತಮ ಶಿಕ್ಷಕರು, ಪ್ರಾಮಾಣಿಕ ಪತ್ರಕರ್ತರು ಮತ್ತು ನಿಷ್ಠಾವಂತ ಪೊಲೀಸರು ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುತ್ತಾರೆ ಎಂದರು.</p>.<p>ಹಿರಿಯ ಪತ್ರಕರ್ತರಾದ ವಿಲಾಸ್ ಜೋಶಿ, ಜಿತೇಂದ್ರ ಶಿಂದೆ, ಬಿ.ಬಿ. ದೇಸಾಯಿ, ಶಿಕ್ಷಕ ಶೇಖರ್ ಕರಂಬೇಲ್ಕರ್, ಯುವರಾಜ ರತ್ನಾಕರ್, ಕಲ್ಲಪ್ಪ ಪಾಟೀಲ, ಉಮೇಶ ಬಾಲೇಕುಂದ್ರಿ, ಪೊಲೀಸ್ ಕಾನ್ಸ್ಟೆಬಲ್ ಮಹೇಶ್ ಪಾಟೀಲ, ಹೆಡ್ ಕಾನ್ಸ್ಟೆಬಲ್ ಶ್ರೀಕಾಂತ್ ಉಪ್ಪಾರ್ ಅವರನ್ನು ಸನ್ಮಾನಿಸಲಾಯಿತು.</p>.<p>ಸಿ.ಎ. ಜೀವನ ಶಹಾಪುರಕರ, ಧನಶ್ರೀ ಸೊಸೈಟಿ ಅಧ್ಯಕ್ಷ ನಿತಿನ್ ಯೇತೋಜಿ, ವಿ.ಕೆ. ಶೃಂಗೇರಿ, ಫೌಂಡೇಶನ್ ಅಧ್ಯಕ್ಷೆ ಜಯಶ್ರೀ ಪಾಟೀಲ, ಸಂಸ್ಥಾಪಕ ಸತೀಶ್ ಪಾಟೀಲ, ಉಪಾಧ್ಯಕ್ಷ ಕಲ್ಲಪ್ಪ ಕಡಮ್ ಇದ್ದರು. ಸಿ.ವೈ. ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಎನ್.ಡಿ. ಮಾದಾರ್ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ‘ಸಮಾಜ ನಿರ್ಮಾಣದಲ್ಲಿ ಎಲ್ಲ ವರ್ಗಗಳು ಜನರಷ್ಟೇ; ಸ್ವಚ್ಛತಾ ಕಾರ್ಮಿಕರ ಪಾತ್ರವೂ ಅತ್ಯಂತ ಮಹತ್ವದ್ದು’ ಎಂದು ಮೇಯರ್ ಮಂಗೇಶ ಪವಾರ್ ಹೇಳಿದರು.</p>.<p>ವೇದಾಂತ ಫೌಂಡೇಶನ್ ಶನಿವಾರ ಆಯೋಜಿಸಿದ್ದ ಶಿಕ್ಷಕರು, ಪತ್ರಕರ್ತರು, ಪೊಲೀಸರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದ ಅವರು, ‘ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುತ್ತಾರೆ. ಪತ್ರಕರ್ತರು ಸಮಾಜದ ಕಣ್ಣಾಗಿದ್ದಾರೆ. ಪೊಲೀಸರು ಶಾಂತಿ, ಕಾನೂನು ಕಾಪಾಡುತ್ತಾರೆ. ಆದರೆ ಈ ಎಲ್ಲರ ಜೊತೆಗೆ ನಗರವನ್ನು ಸ್ವಚ್ಛವಾಗಿ ಇಡುವ ಸ್ವಚ್ಛತಾ ಕಾರ್ಮಿಕರು ಕೂಡ ಸಮಾಜದ ನಿಜವಾದ ಹೀರೋಗಳು’ ಎಂದರು.</p>.<p>ಉಪಮೇಯರ್ ವಾಣಿ ಜೋಶಿ ಮಾತನಾಡಿ, ‘ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡಲು ಎಲ್ಲರ ಸಹಕಾರ ಅಗತ್ಯ’ ಎಂದು ತಿಳಿಸಿದರು.</p>.<p>‘ಫಾಸ್ಟ್ ಫುಡ್ ಸಂಸ್ಕೃತಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದರಿಂದ ಜನರು ಆರೋಗ್ಯದ ಬಗ್ಗೆ ಎಚ್ಚರವಾಗಿರಬೇಕು’ ಎಂದರು.</p>.<p>ಡಿಸಿಪಿ ನಿರಂಜನರಾಜೆ ಅರಸ್, ಉದ್ಯಮಿ ಆರ್.ವೈ. ಪಾಟೀಲ, ಅಶೋಕ್ ನಾಯಕ್, ಸಂತೋಷ್ ಜೈನೋಜಿ, ಲಿಂಗರಾಜ್ ಜಗಜಂಪಿ, ವೀರೇಶ್ ಕಿವಡಸಣ್ಣವರ ಮತ್ತಿತರರು ಮಾತನಾಡಿದರು.</p>.<p>ಅಧ್ಯಕ್ಷ ಆರ್.ಎಂ. ಚೌಗಲೆ ಅವರು, ಉತ್ತಮ ಶಿಕ್ಷಕರು, ಪ್ರಾಮಾಣಿಕ ಪತ್ರಕರ್ತರು ಮತ್ತು ನಿಷ್ಠಾವಂತ ಪೊಲೀಸರು ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುತ್ತಾರೆ ಎಂದರು.</p>.<p>ಹಿರಿಯ ಪತ್ರಕರ್ತರಾದ ವಿಲಾಸ್ ಜೋಶಿ, ಜಿತೇಂದ್ರ ಶಿಂದೆ, ಬಿ.ಬಿ. ದೇಸಾಯಿ, ಶಿಕ್ಷಕ ಶೇಖರ್ ಕರಂಬೇಲ್ಕರ್, ಯುವರಾಜ ರತ್ನಾಕರ್, ಕಲ್ಲಪ್ಪ ಪಾಟೀಲ, ಉಮೇಶ ಬಾಲೇಕುಂದ್ರಿ, ಪೊಲೀಸ್ ಕಾನ್ಸ್ಟೆಬಲ್ ಮಹೇಶ್ ಪಾಟೀಲ, ಹೆಡ್ ಕಾನ್ಸ್ಟೆಬಲ್ ಶ್ರೀಕಾಂತ್ ಉಪ್ಪಾರ್ ಅವರನ್ನು ಸನ್ಮಾನಿಸಲಾಯಿತು.</p>.<p>ಸಿ.ಎ. ಜೀವನ ಶಹಾಪುರಕರ, ಧನಶ್ರೀ ಸೊಸೈಟಿ ಅಧ್ಯಕ್ಷ ನಿತಿನ್ ಯೇತೋಜಿ, ವಿ.ಕೆ. ಶೃಂಗೇರಿ, ಫೌಂಡೇಶನ್ ಅಧ್ಯಕ್ಷೆ ಜಯಶ್ರೀ ಪಾಟೀಲ, ಸಂಸ್ಥಾಪಕ ಸತೀಶ್ ಪಾಟೀಲ, ಉಪಾಧ್ಯಕ್ಷ ಕಲ್ಲಪ್ಪ ಕಡಮ್ ಇದ್ದರು. ಸಿ.ವೈ. ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಎನ್.ಡಿ. ಮಾದಾರ್ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>