‘ಮಹಾನಗರಪಾಲಿಕೆ ಚುನಾವಣೆ ರಾಮತೀರ್ಥನಗರದ ವಾರ್ಡ್ ನಂ. 46ರಲ್ಲಿ ಮತದಾನ ಮಾಡಲು ಹೋದ ಮತದಾರರ ದ್ವಿಚಕ್ರವಾಹನಗಳ ಚಕ್ರಗಳಲ್ಲಿನ ಗಾಳಿ ತೆಗೆದು ಪೊಲೀಸರು ಹಿಂಸೆ ಕೊಡುತ್ತಿದ್ದಾರೆ. ಅಲ್ಲಿ ಪೂರ್ಣ ಬಯಲಿನ ರಸ್ತೆ ಇದೆ. ಯಾವ ಅಡಚಣಿಗಳಿಲ್ಲ. ಯಾವ ಸಂಚಾರಿ ನಿಯಮಗಳ ಫಲಕವಿಲ್ಲ. ಆದರೂ ಮತದಾನ ಹಾಕಿ ಬರುವಷ್ಟರಲ್ಲಿ ಚಕ್ರದ ಗಾಳಿ ತೆಗೆದಿದ್ದಾರೆ’ ಎಂದು ನಾಟಕಕಾರ ಡಿ.ಎಸ್. ಚೌಗಲೆ ದೂರಿದ್ದಾರೆ.