ಬೆಳಗಾವಿ: ಜಿಲ್ಲೆಯೂ ಸೇರಿದಂತೆ ಗಡಿಗೆ ಹೊಂದಿಕೊಂಡಿರುವ ನೆರೆಯ ಮಹಾರಾಷ್ಟ್ರದಲ್ಲಿ ಸೋಮವಾರ ಮಳೆಯ ರಭಸ ತಗ್ಗಿದೆ. ಕೃಷ್ಣಾ ಹಾಗೂ ಉಪನದಿಗಳ ಹರಿವೂ ಕಡಿಮೆಯಾಗಿದೆ.
ಕೃಷ್ಣಾ ಹರಿವು ಕಡಿಮೆಯಾಗಿದೆ. ರಾಜಾಪುರ ಬ್ಯಾರೇಜ್ ಮೂಲಕ 1.20 ಲಕ್ಷ ಕ್ಯುಸೆಕ್, ದೂಧ್ಗಂಗಾ ನದಿಯಿಂದ 31,504 ಕ್ಯುಸೆಕ್ ಸೇರಿದಂತೆ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 1.51 ಲಕ್ಷ ಕ್ಯುಸೆಕ್ ನೀರು ಸೇರಿಕೊಳ್ಳುತ್ತಿದೆ.
ವೇದಗಂಗಾ, ದೂಧ್ಗಂಗಾ, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ ನದಿಗಳ ಹರಿವು ಕಡಿಮೆಯಾಗಿದೆ.