‘ಶಾಸಕರು ಪೊಲೀಸರಿಂದ ಹೂಗುಚ್ಚ ಸ್ವೀಕರಿಸಬೇಕಿತ್ತು. ಅದರ ಬದಲಾಗಿ ಪುಷ್ಪವೃಷ್ಟಿ ಮಾಡಿಸಿಕೊಂಡಿರುವುದು ಸರಿಯಾದ ಕ್ರಮವಲ್ಲ. ಪೊಲೀಸರೂ ಹಾಗೆ ವರ್ತಿಸಿರುವುದು ಖಂಡನೀಯ’ ಎಂದು ಇಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳು ಸೇವಕರಂತೆ ಶಾಸಕರ ಮನೆ ಬಾಗಿಲಿಗೆ ತೆರಳಿ ಈ ರೀತಿ ಹುಟ್ಟುಹಬ್ಬಕ್ಕೆ ಶುಭ ಹಾರೈಸಿರುವುದು ನಗೆಪಾಟಲಿಗೀಡಾಗಿದೆ. ಆ ವೇಳೆ ಡಿವೈಎಸ್ಪಿ, ಸಿಪಿಐ, ಪಿಎಸ್ಐ, ಎಸ್ಐ, ಕಾನ್ಸ್ಟೆಬಲ್ಗಳು ಪಾಲ್ಗೊಂಡಿದ್ದರು.