‘ಬೇಸಿಗೆ ಬಿಸಿಲಲ್ಲಿ ಹಾಕಿದ ಕಾಂಕ್ರೀಟ್ಗೆ ನೀರು ಹಾಕಲಿಲ್ಲ. ಕಾಮಗಾರಿ ಕಳಪೆ ಆಗಿಬಿಟ್ಟರೆ ಮುಂಬರುವ ದಿನಗಳಲ್ಲಿ ನಮ್ಮ ಹೊಲಗಳಿಗೆ ನೀರು ಹರಿಸುವುದು ಕಷ್ಟಸಾಧ್ಯ. ಈ ಮೃದು ಮಣ್ಣಿನಲ್ಲಿ ಕಾಟಾಚಾರಕ್ಕೆ ನಾಲೆಗೆ ಕಾಂಕ್ರೀಟ್ ಬೆಡ್ ಹಾಕಿದ್ದಾರೆ. 10 ಅಡಿ ಎತ್ತರದ ಕಾಲುವೆ ಕೆಲವೆಡೆ ನಿರ್ಮಿಸಲಾಗುತ್ತಿದೆ. ಮಳೆ ಸುರಿದರೆ ಮಣ್ಣು ಕುಸಿದು ಮುಚ್ಚಿ ಹೋಗುತ್ತದೆ’ ಎಂದು ತಿಳಿಸುತ್ತಾರೆ ಅವರು.