<p><strong>ಬೆಳಗಾವಿ</strong>: ‘ಹೊಯ್ಸಳ ಚಲನಚಿತ್ರ ಮಾರ್ಚ್ 30ರಂದು ರಾಜ್ಯದಾದ್ಯಂತ ತೆರೆ ಕಾಣಲಿದ್ದು, ಈ ಭಾಗದ ಪ್ರೇಕ್ಷಕರು ವೀಕ್ಷಿಸಿ, ಪ್ರೋತ್ಸಾಹಿಸಬೇಕು’ ಎಂದು ನಟ ಡಾಲಿ ಧನಂಜಯ ಕೋರಿದರು.</p>.<p>ಇಲ್ಲಿನ ರಾಣಿ ಚನ್ನಮ್ಮನ ವೃತ್ತಕ್ಕೆ ಭಾನುವಾರ ಆಗಮಿಸಿ, ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.</p>.<p>‘ಬೆಳಗಾವಿ, ಅಥಣಿ, ಸಂಕೇಶ್ವರದಲ್ಲಿ ‘ಹೊಯ್ಸಳ’ ಚಲನಚಿತ್ರದ ಚಿತ್ರೀಕರಣ ನಡೆದಿದೆ. ಆ ವೇಳೆ, ಇಲ್ಲಿನ ಜನರು ಬಹಳಷ್ಟು ಪ್ರೀತಿ ತೋರಿಸಿದ್ದರು. ಕುಟುಂಬ ಸಮೇತರಾಗಿ ಚಲನಚಿತ್ರ ಮಂದಿರಕ್ಕೆ ಹೋಗಿ, ಚಿತ್ರ ನೋಡಿ ಆನಂದಿಸಬೇಕು’ ಎಂದು ಹೇಳಿದರು.</p>.<p>ನೆಚ್ಚಿನ ನಟನನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ನಟ ಆರ್.ಅಭಿಲಾಷ, ಕರವೇ ಮುಖಂಡ ಉಮೇಶ ಆಚಾರ್ಯ, ರವಿ ಪೂಜಾರಿ, ಬಾಳಾಸಾಹೇಬ ಉದಗಟ್ಟಿ ಇತರರಿದ್ದರು.</p>.<p>ಬಳಿಕ, ನಂದಗಡಕ್ಕೆ ತೆರಳಿ, ಕ್ರಾಂತಿವೀರ ರಾಯಣ್ಣನ ಪ್ರತಿಮೆಗೆ ಗೌರವ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ‘ಹೊಯ್ಸಳ ಚಲನಚಿತ್ರ ಮಾರ್ಚ್ 30ರಂದು ರಾಜ್ಯದಾದ್ಯಂತ ತೆರೆ ಕಾಣಲಿದ್ದು, ಈ ಭಾಗದ ಪ್ರೇಕ್ಷಕರು ವೀಕ್ಷಿಸಿ, ಪ್ರೋತ್ಸಾಹಿಸಬೇಕು’ ಎಂದು ನಟ ಡಾಲಿ ಧನಂಜಯ ಕೋರಿದರು.</p>.<p>ಇಲ್ಲಿನ ರಾಣಿ ಚನ್ನಮ್ಮನ ವೃತ್ತಕ್ಕೆ ಭಾನುವಾರ ಆಗಮಿಸಿ, ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.</p>.<p>‘ಬೆಳಗಾವಿ, ಅಥಣಿ, ಸಂಕೇಶ್ವರದಲ್ಲಿ ‘ಹೊಯ್ಸಳ’ ಚಲನಚಿತ್ರದ ಚಿತ್ರೀಕರಣ ನಡೆದಿದೆ. ಆ ವೇಳೆ, ಇಲ್ಲಿನ ಜನರು ಬಹಳಷ್ಟು ಪ್ರೀತಿ ತೋರಿಸಿದ್ದರು. ಕುಟುಂಬ ಸಮೇತರಾಗಿ ಚಲನಚಿತ್ರ ಮಂದಿರಕ್ಕೆ ಹೋಗಿ, ಚಿತ್ರ ನೋಡಿ ಆನಂದಿಸಬೇಕು’ ಎಂದು ಹೇಳಿದರು.</p>.<p>ನೆಚ್ಚಿನ ನಟನನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ನಟ ಆರ್.ಅಭಿಲಾಷ, ಕರವೇ ಮುಖಂಡ ಉಮೇಶ ಆಚಾರ್ಯ, ರವಿ ಪೂಜಾರಿ, ಬಾಳಾಸಾಹೇಬ ಉದಗಟ್ಟಿ ಇತರರಿದ್ದರು.</p>.<p>ಬಳಿಕ, ನಂದಗಡಕ್ಕೆ ತೆರಳಿ, ಕ್ರಾಂತಿವೀರ ರಾಯಣ್ಣನ ಪ್ರತಿಮೆಗೆ ಗೌರವ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>