<p><strong>ಬೆಳಗಾವಿ</strong>: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಸಂಪೂರ್ಣ ಕನ್ನಡ ಅನುಷ್ಠಾನ ಮಾಡಬೇಕು ಎಂಬ ವಿಷಯ ಗುರುವಾರ ಪಾಲಿಕೆಯ ಪರಿಷತ್ ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.</p><p>ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ಹಾಗೂ ಕನ್ನಡ ಭಾಷಿಕ ಸದಸ್ಯರ ಮಧ್ಯೆ ವಾಗ್ವಾದ ಉಂಟಾಯಿತು. ಎಂಇಎಸ್ನ ಉದ್ಧಟತನ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪರಿಷತ್ ಸಭಾಂಗಣಕ್ಕೂ ನುಗ್ಗಲು ಯತ್ನಿಸಿದರು. </p><p>ಸಭೆ ಆರಂಭದಲ್ಲಿಯೇ ಎಂಇಎಸ್ ಬೆಂಬಲಿತ ಸದಸ್ಯ ರವಿ ಸಾಳುಂಕೆ, ‘ಕನ್ನಡದ ಜೊತೆ ಮರಾಠಿಯಲ್ಲೂ ನಡಾವಳಿ ನೀಡಬೇಕು. ಭಾಷಾ ಅಲ್ಪಸಂಖ್ಯಾತ ಕಾಯ್ದೆ ಪಾಲಿಸಬೇಕು’ ಎಂದರು. ಇದಕ್ಕೆ ಶಿವಾಜಿ ಮಂಡೋಳಕರ, ವೈಶಾಲಿ ಭಾತಕಾಂಡೆ ಬೆಂಬಲ ವ್ಯಕ್ತಪಡಿಸಿದರು.</p><p>ಸಿಟ್ಟಿಗೆದ್ದ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ, ‘ಇದು ಕರ್ನಾಟಕ. ಇಲ್ಲಿ ಕನ್ನಡವೇ ಆಡಳಿತ ಭಾಷೆ. ಮರಾಠಿಯಲ್ಲಿ ನಡಾವಳಿ ಬೇಕಿದ್ದರೆ ಮಹಾರಾಷ್ಟ್ರಕ್ಕೆ ಹೋಗಿ. ಮರಾಠಿಯಲ್ಲಿ ನಡಾವಳಿ ಕೊಡಬಾರದು’ ಎಂದರು. ಬಿಜೆಪಿ ಸದಸ್ಯರೂ ದನಿಗೂಡಿಸಿದರು.</p><p>ವಾಗ್ವಾದ ಜೋರಾದಾಗ, ಎಂಇಎಸ್ ಬೆಂಬಲಿತ ಸದಸ್ಯರು ಸಭಾತ್ಯಾಗ ಮಾಡಿದರು. ಮೇಯರ್ ಮಂಗೇಶ ಪವಾರ ಈ ಹಂತದಲ್ಲಿ ಕೆಲಹೊತ್ತು ಸಭೆ ಮುಂದೂಡಿದರು.</p><p>‘ಕಾಂಗ್ರೆಸ್ ಬೆಂಬಲದಿಂದ ರವಿ ಸಾಳುಂಕೆ ಪ್ರತಿಬಾರಿ ಹೀಗೆ ವರ್ತಿಸುತ್ತಾರೆ. ಶಾಸಕ ಆಸಿಫ್ ಸೇಠ್ ಅವರನ್ನು ನಿಯಂತ್ರಿಸಬೇಕು’ ಎಂದು ಶಾಸಕ ಅಭಯ ಪಾಟೀಲ ಆಗ್ರಹಿಸಿದರು.</p><p>ಒಳಗಡೆ ಏರುಧ್ವನಿಯ ಚರ್ಚೆ ಆರಂಭದಂತೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಧಿಕ್ಕಾರ ಕೂಗಿದರು.</p><p>‘ಮರಾಠಿಯಲ್ಲಿ ನಡಾವಳಿ ಕೇಳಿದವರ ಸದಸ್ಯತ್ವ ರದ್ದುಮಾಡಿ, ಗಡಿಪಾರು ಮಾಡಬೇಕು’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಆಗ್ರಹಿಸಿದರು. ಪೊಲೀಸರು ಸಂಘಟನೆಯ ಕಾರ್ಯ ಕರ್ತರನ್ನು ಹೊರಗೆ ಕಳುಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಸಂಪೂರ್ಣ ಕನ್ನಡ ಅನುಷ್ಠಾನ ಮಾಡಬೇಕು ಎಂಬ ವಿಷಯ ಗುರುವಾರ ಪಾಲಿಕೆಯ ಪರಿಷತ್ ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.</p><p>ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ಹಾಗೂ ಕನ್ನಡ ಭಾಷಿಕ ಸದಸ್ಯರ ಮಧ್ಯೆ ವಾಗ್ವಾದ ಉಂಟಾಯಿತು. ಎಂಇಎಸ್ನ ಉದ್ಧಟತನ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪರಿಷತ್ ಸಭಾಂಗಣಕ್ಕೂ ನುಗ್ಗಲು ಯತ್ನಿಸಿದರು. </p><p>ಸಭೆ ಆರಂಭದಲ್ಲಿಯೇ ಎಂಇಎಸ್ ಬೆಂಬಲಿತ ಸದಸ್ಯ ರವಿ ಸಾಳುಂಕೆ, ‘ಕನ್ನಡದ ಜೊತೆ ಮರಾಠಿಯಲ್ಲೂ ನಡಾವಳಿ ನೀಡಬೇಕು. ಭಾಷಾ ಅಲ್ಪಸಂಖ್ಯಾತ ಕಾಯ್ದೆ ಪಾಲಿಸಬೇಕು’ ಎಂದರು. ಇದಕ್ಕೆ ಶಿವಾಜಿ ಮಂಡೋಳಕರ, ವೈಶಾಲಿ ಭಾತಕಾಂಡೆ ಬೆಂಬಲ ವ್ಯಕ್ತಪಡಿಸಿದರು.</p><p>ಸಿಟ್ಟಿಗೆದ್ದ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ, ‘ಇದು ಕರ್ನಾಟಕ. ಇಲ್ಲಿ ಕನ್ನಡವೇ ಆಡಳಿತ ಭಾಷೆ. ಮರಾಠಿಯಲ್ಲಿ ನಡಾವಳಿ ಬೇಕಿದ್ದರೆ ಮಹಾರಾಷ್ಟ್ರಕ್ಕೆ ಹೋಗಿ. ಮರಾಠಿಯಲ್ಲಿ ನಡಾವಳಿ ಕೊಡಬಾರದು’ ಎಂದರು. ಬಿಜೆಪಿ ಸದಸ್ಯರೂ ದನಿಗೂಡಿಸಿದರು.</p><p>ವಾಗ್ವಾದ ಜೋರಾದಾಗ, ಎಂಇಎಸ್ ಬೆಂಬಲಿತ ಸದಸ್ಯರು ಸಭಾತ್ಯಾಗ ಮಾಡಿದರು. ಮೇಯರ್ ಮಂಗೇಶ ಪವಾರ ಈ ಹಂತದಲ್ಲಿ ಕೆಲಹೊತ್ತು ಸಭೆ ಮುಂದೂಡಿದರು.</p><p>‘ಕಾಂಗ್ರೆಸ್ ಬೆಂಬಲದಿಂದ ರವಿ ಸಾಳುಂಕೆ ಪ್ರತಿಬಾರಿ ಹೀಗೆ ವರ್ತಿಸುತ್ತಾರೆ. ಶಾಸಕ ಆಸಿಫ್ ಸೇಠ್ ಅವರನ್ನು ನಿಯಂತ್ರಿಸಬೇಕು’ ಎಂದು ಶಾಸಕ ಅಭಯ ಪಾಟೀಲ ಆಗ್ರಹಿಸಿದರು.</p><p>ಒಳಗಡೆ ಏರುಧ್ವನಿಯ ಚರ್ಚೆ ಆರಂಭದಂತೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಧಿಕ್ಕಾರ ಕೂಗಿದರು.</p><p>‘ಮರಾಠಿಯಲ್ಲಿ ನಡಾವಳಿ ಕೇಳಿದವರ ಸದಸ್ಯತ್ವ ರದ್ದುಮಾಡಿ, ಗಡಿಪಾರು ಮಾಡಬೇಕು’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಆಗ್ರಹಿಸಿದರು. ಪೊಲೀಸರು ಸಂಘಟನೆಯ ಕಾರ್ಯ ಕರ್ತರನ್ನು ಹೊರಗೆ ಕಳುಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>