ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ರಾಮಪ್ಪ ಅವರನ್ನು ಭೇಟಿಯಾಗಲು ಅನುಮತಿ ಪಡೆದಿದ್ದ ಬಿಜೆಪಿ ನಾಯಕರು, ಕಚೇರಿಯೊಳಗೆ ತೆರಳಲು ಮುಂದಾದರು. ಆದರೆ, ಕ್ಯಾಂಪ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅಲ್ತಾಫ್ ಮತ್ತು ಇತರೆ ಪೊಲೀಸರು ಕಚೇರಿಯೊಳಗೆ ಹೋಗಲು ಅವಕಾಶ ನೀಡಲಿಲ್ಲ. ಹಾಗಾಗಿ ಕಚೇರಿ ಮುಂದೆಯೇ ಪ್ರತಿಭಟನೆಗೆ ಕುಳಿತರು.