'ಹಿಂದೆ ಏನೇ ಆಗಿರಬಹುದು, ಈಗ ಒಂದಾಗಿದ್ದೇವೆ'
ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿ, ‘ಹಿಂದೆ ನಮ್ಮ ನಡುವೆ ಏನೇ ಆಗಿರಬಹುದು. ಆದರೆ, ಈಗ ಒಂದಾಗಿದ್ದೇವೆ. ವಾಯವ್ಯ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದದ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವಾಗಲಿದೆ. ಹಿಂದೆ ಆಗಿರುವ ಘಟನೆಗಳ ಬಗ್ಗೆ ಚರ್ಚಿಸುವ ಸಮಯವಿದಲ್ಲ. ಹಿಂದಿನದು ಆಗಿರುವುದು ಆಗಬಾರದ’ ಎಂದರು.