<p><strong>ಬೆಳಗಾವಿ: </strong>‘ಉತ್ತಮ ಪುಸ್ತಕಗಳು ನಮಗೆ ಸರಿಯಾದ ಮಾರ್ಗದರ್ಶನ ನೀಡುತ್ತವೆ. ನಿಜವಾದ ಸ್ನೇಹಿತರಾಗುತ್ತವೆ. ಹೀಗಾಗಿ, ಓದಿಗೆ ಸರಿಸಾಟಿಯಾದುದು ಯಾವುದೂ ಇಲ್ಲ’ ಎಂದುಭರತೇಶ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಪ್ರೇಮಚಂದ ಲೇಂಗಡೆ ಹೇಳಿದರು.</p>.<p>ಇಲ್ಲಿನ ಭರತೇಶ ಶಿಕ್ಷಣ ಸಂಸ್ಥೆಯ ಗ್ಲೋಬಲ್ ಬಿಸಿನೆಸ್ ಸ್ಕೂಲ್ನಲ್ಲಿ ಆಯೋಜಿಸಿದ್ದ ಪುಸ್ತಕ ಪ್ರದರ್ಶನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಪುಸ್ತಕಗಳು ಮನುಷ್ಯನಿಗೆ ಬೇರೆ ಬೇರೆ ರೀತಿಯ ಅನುಭವಗಳನ್ನು ನೀಡುತ್ತವೆ. ನಾನು ಇವತ್ತಿಗೂ ಪುಸ್ತಕಗಳನ್ನು ಕೊಳ್ಳುತ್ತೇನೆ. ಓದುತ್ತೇನೆ. ಓದಿದ ನಂತರ ಅದರಲ್ಲಿನ ವಿಷಯ ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವುದರಲ್ಲಿ ಸಿಗುವ ಆನಂದ ಬೇರಾವುದರಲ್ಲೂ ಕಂಡಿಲ್ಲ’ ಎಂದರು.</p>.<p>ಗ್ಲೋಬಲ್ ಬಿಸಿನೆಸ್ ಸ್ಕೂಲ್ ಅಧ್ಯಕ್ಷ ವಿನೋದ್ ದೊಡ್ಡಣ್ಣವರ ಮಾತನಾಡಿ, ‘ವಿದ್ಯಾರ್ಥಿಗಳು ಪುಸ್ತಕಗಳಿಂದ ಪ್ರಯೋಜನ ಪಡೆದುಕೊಳ್ಳಬೇಕು. ಓದಿದರೆ ಮಾತ್ರ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಬರುತ್ತದೆ. ವೃತ್ತಿ ಜೀವನದ ಏಳಿಗೆಗೂ ಅವು ಸಹಕಾರಿಯಾಗಿವೆ’ ಎಂದು ತಿಳಿಸಿದರು.</p>.<p>ಭರತೇಶ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಾದ ಪ್ರಕಾಶ ದೊಡ್ಡಣ್ಣವರ, ಶ್ರೀಪಾಲ ಖೇಮಲಾಪುರೆ, ಭೂಷಣ ಮಿರ್ಜಿ, ಮಹಾವೀರ ಉಪಾಧ್ಯೆ, ಅನುಪಮಾ ಶಿರಹಟ್ಟಿ, ಪ್ರಾಧ್ಯಾಪಕ ಎ.ಆರ್. ರೊಟ್ಟಿ, ನಿರ್ದೇಶಕ ಪ್ರಸಾದ ದಡ್ಡಿಕರ, ಸಹಾಯಕ ಗ್ರಂಥಪಾಲಕಿ ಜ್ಯೋತಿ ಪಾಟೀಲ ಇದ್ದರು.</p>.<p>ಕರ್ಮವೀರ ಭಾವುರಾವ ಪಾಟೀಲ ಗ್ರಂಥಾಲಯದ ಗ್ರಂಥಪಾಲಕ ಭರತ ಅಲಸಂದಿ ಸ್ವಾಗತಿಸಿದರು. ಸ್ವಾತಿ ಜೋಗ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>‘ಉತ್ತಮ ಪುಸ್ತಕಗಳು ನಮಗೆ ಸರಿಯಾದ ಮಾರ್ಗದರ್ಶನ ನೀಡುತ್ತವೆ. ನಿಜವಾದ ಸ್ನೇಹಿತರಾಗುತ್ತವೆ. ಹೀಗಾಗಿ, ಓದಿಗೆ ಸರಿಸಾಟಿಯಾದುದು ಯಾವುದೂ ಇಲ್ಲ’ ಎಂದುಭರತೇಶ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಪ್ರೇಮಚಂದ ಲೇಂಗಡೆ ಹೇಳಿದರು.</p>.<p>ಇಲ್ಲಿನ ಭರತೇಶ ಶಿಕ್ಷಣ ಸಂಸ್ಥೆಯ ಗ್ಲೋಬಲ್ ಬಿಸಿನೆಸ್ ಸ್ಕೂಲ್ನಲ್ಲಿ ಆಯೋಜಿಸಿದ್ದ ಪುಸ್ತಕ ಪ್ರದರ್ಶನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಪುಸ್ತಕಗಳು ಮನುಷ್ಯನಿಗೆ ಬೇರೆ ಬೇರೆ ರೀತಿಯ ಅನುಭವಗಳನ್ನು ನೀಡುತ್ತವೆ. ನಾನು ಇವತ್ತಿಗೂ ಪುಸ್ತಕಗಳನ್ನು ಕೊಳ್ಳುತ್ತೇನೆ. ಓದುತ್ತೇನೆ. ಓದಿದ ನಂತರ ಅದರಲ್ಲಿನ ವಿಷಯ ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವುದರಲ್ಲಿ ಸಿಗುವ ಆನಂದ ಬೇರಾವುದರಲ್ಲೂ ಕಂಡಿಲ್ಲ’ ಎಂದರು.</p>.<p>ಗ್ಲೋಬಲ್ ಬಿಸಿನೆಸ್ ಸ್ಕೂಲ್ ಅಧ್ಯಕ್ಷ ವಿನೋದ್ ದೊಡ್ಡಣ್ಣವರ ಮಾತನಾಡಿ, ‘ವಿದ್ಯಾರ್ಥಿಗಳು ಪುಸ್ತಕಗಳಿಂದ ಪ್ರಯೋಜನ ಪಡೆದುಕೊಳ್ಳಬೇಕು. ಓದಿದರೆ ಮಾತ್ರ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಬರುತ್ತದೆ. ವೃತ್ತಿ ಜೀವನದ ಏಳಿಗೆಗೂ ಅವು ಸಹಕಾರಿಯಾಗಿವೆ’ ಎಂದು ತಿಳಿಸಿದರು.</p>.<p>ಭರತೇಶ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಾದ ಪ್ರಕಾಶ ದೊಡ್ಡಣ್ಣವರ, ಶ್ರೀಪಾಲ ಖೇಮಲಾಪುರೆ, ಭೂಷಣ ಮಿರ್ಜಿ, ಮಹಾವೀರ ಉಪಾಧ್ಯೆ, ಅನುಪಮಾ ಶಿರಹಟ್ಟಿ, ಪ್ರಾಧ್ಯಾಪಕ ಎ.ಆರ್. ರೊಟ್ಟಿ, ನಿರ್ದೇಶಕ ಪ್ರಸಾದ ದಡ್ಡಿಕರ, ಸಹಾಯಕ ಗ್ರಂಥಪಾಲಕಿ ಜ್ಯೋತಿ ಪಾಟೀಲ ಇದ್ದರು.</p>.<p>ಕರ್ಮವೀರ ಭಾವುರಾವ ಪಾಟೀಲ ಗ್ರಂಥಾಲಯದ ಗ್ರಂಥಪಾಲಕ ಭರತ ಅಲಸಂದಿ ಸ್ವಾಗತಿಸಿದರು. ಸ್ವಾತಿ ಜೋಗ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>