ಬೆಳಗಾವಿ: ತಾಲ್ಲೂಕಿನ ಹಲಗಾ- ಮಚ್ಛೆ ಬೈಪಾಸ್ ಕಾಮಗಾರಿಯನ್ನು ರೈತರ ವಿರೋಧದ ನಡುವೆಯೂ ಮುಂದುವರಿಸಲಾಗಿದೆ.
ಕಾಮಗಾರಿಯನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಪರಿಶೀಲಿಸಿದರು. ಪೊಲೀಸ್ ಭದ್ರತೆಯಲ್ಲಿ ಹೆದ್ದಾರಿ ಪ್ರಾಧಿಕಾರದವರು ಕಾಮಗಾರಿ ಮುಂದುವರಿಸಿದ್ದಾರೆ.
ಡಿಸಿಪಿ ವಿಕ್ರಂ ಅಮಟೆ ಹಾಗೂ ಅಧಿಕಾರಿಗಳು ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದಾರೆ. ಕೆಲವು ರೈತರು ತಮ್ಮ ಜಮೀನಿಗೆ ಅಡ್ಡಿಪಡಿಸಬೇಡಿ ಹಾಗೂ ಬೆಳೆ ಕಟಾವಿನ ನಂತರ ಕಾಮಗಾರಿ ನಡೆಸಿ ಎಂದು ಮನವಿ ಮಾಡಿದರು. ಅದಕ್ಕೆ ಜಿಲ್ಲಾಧಿಕಾರಿ ಸಮ್ಮತಿ ಸೂಚಿಸಿದರು.