ಸಂಕೇಶ್ವರ: ಗ್ರಾಮಸ್ಥರಿಗೆ ಬೇಕಾಗುವ ಅತ್ಯವಶ್ಯಕ ಸರ್ಕಾರಿ ಸೇವೆಗಳನ್ನು ಮುಂದಿನ ಜ.26ರಿಂದ ಗ್ರಾಮ ಪಂಚಾ ಯಿತಿ ವತಿಯಿಂದಲೇ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಸಂಕೇಶ್ವರದಲ್ಲಿ ಶನಿವಾರ ಪುರ ಸಭೆಯ ನೂತನ ಕಾರ್ಯಾಲಯ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣಗಳನ್ನು ಉದ್ಘಾಟಿಸಿ ಮಾತನಾಡಿದರು.
ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ ಹಾಗೂ ಇನ್ನಿತರ ಸರ್ಕಾರಿ ಸೇವೆಗಳನ್ನು ಪಂಚಾಯಿತಿ ಮಟ್ಟದಲ್ಲಿಯೇ ವಿತರಿಸಲಾಗುವುದು. ಇದನ್ನು ಪ್ರಾಯೋಗಿಕವಾಗಿ 5 ಜಿಲ್ಲೆಗಳಲ್ಲಿ ನಡೆಸ ಲಾಗುವುದು ಎಂದು ಹೇಳಿದರು.