<p><strong>ಚನ್ನಮ್ಮನ ಕಿತ್ತೂರು (ಬೆಳಗಾವಿ): </strong>ಐತಿಹಾಸಿಕ ಚನ್ನಮ್ಮನ ಕಿತ್ತೂರಿನಲ್ಲಿ ಶನಿವಾರ ಆಯೋಜಿಸಿದ "ಅಮೃತ ಭಾರತಿಗೆ ಕನ್ನಡದಾರತಿ" ಕಾರ್ಯಕ್ರಮ ಅಂಗವಾಗಿ ಸಂಭ್ರಮದ ಮೆರವಣಿಗೆ ನಡೆಯಿತು.</p>.<p>ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ವೀರರಾಣಿ ಚನ್ನಮ್ಮನ ಪ್ರತಿಮೆಗೆ ಶಾಸಕ ಮಹಾಂತೇಶ ದೂಡ್ಡಗೌಡ್ರ ಅವರು ಮಾಲಾರ್ಪಣೆ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.</p>.<p>ಇಳಕಲ್ ಸೀರೆಯುಟ್ಟು, ಸಾಂಪ್ರದಾಯಿಕ ಆಭರಣ ಧರಿಸಿ ಬಂದ ಮಹಿಳೆಯರು ಪೂರ್ಣಕುಂಭ ಕಲಶ ಹೊತ್ತು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಿದರು.</p>.<p>ಅವರ ಹಿಂದೆ ವಿವಿಧ ವಾದ್ಯತಂಡಗಳು ನಡೆದವು. ಡೊಳ್ಳು ಕಲಾವಿದರು, ಹಲಗೆಯವರು, ಝಾಂಝ್ ಪಥಕ್, ತಾಸೆಮೇಳದ ತಂಡಗಳು ಮೆರವಣಿಗೆಗೆ ಮೆರಗು ತಂದವು. ಇವರ ಮಧ್ಯೆ ಸಾಗಿದ ಭಾರತಮಾತೆಯ ಭಾವಚಿತ್ರವಿರುವ ವಾಹನಕ್ಕೆ ಜನ ಪುಷ್ಪಾರ್ಚನೆ ಮಾಡಿದರು.</p>.<p>ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಸಮವಸ್ತ್ರಧಾರಿಗಳಾಗಿ ಹಾಡುತ್ತ, ನಲಿಯುತ್ತ ಹೆಜ್ಜೆ ಹಾಕಿದರು.</p>.<p>ಗೊಂಬೆ ವೇಷಧಾರಿಗಳು ಮಾರ್ಗದುದ್ದಕ್ಕೂ ವಾದ್ಯಮೇಳಗಳ ಸದ್ದಿಗೆ ತಕ್ಕಂತೆ ಕುಣಿದು ರಂಜಿಸಿದರು.</p>.<p>ರಾಣಿ ಚನ್ನಮ್ಮನ ವೃತ್ತದಿಂದ ಆರಂಭವಾದ ಮೆರವಣಿಗೆ ಐತಿಹಾಸಿಕ ಕೋಟೆ ಆವರಣದವರೆಗೂ ನಡೆಯಿತು.</p>.<p>ಶಾಸಕ ಮಹಾಂತೇಶ ದೊಡ್ಡಗೌಡ್ರ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ, ಉಪವಿಭಾಗಾಧಿಕಾರಿ ಶಶಿಧರ ಬಗಲಿ, ಕಿತ್ತೂರು ತಹಶೀಲ್ದಾರ್ ಸೋಮಪ್ಪ ಹಾಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಹಾಗೂ ಇತರೆ ಅಧಿಕಾರಿ ಸಿಬ್ಬಂದಿ ಕೂಡ ಹೆಜ್ಜೆ ಹಾಕಿದರು.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಮ್ಮನ ಕಿತ್ತೂರು (ಬೆಳಗಾವಿ): </strong>ಐತಿಹಾಸಿಕ ಚನ್ನಮ್ಮನ ಕಿತ್ತೂರಿನಲ್ಲಿ ಶನಿವಾರ ಆಯೋಜಿಸಿದ "ಅಮೃತ ಭಾರತಿಗೆ ಕನ್ನಡದಾರತಿ" ಕಾರ್ಯಕ್ರಮ ಅಂಗವಾಗಿ ಸಂಭ್ರಮದ ಮೆರವಣಿಗೆ ನಡೆಯಿತು.</p>.<p>ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ವೀರರಾಣಿ ಚನ್ನಮ್ಮನ ಪ್ರತಿಮೆಗೆ ಶಾಸಕ ಮಹಾಂತೇಶ ದೂಡ್ಡಗೌಡ್ರ ಅವರು ಮಾಲಾರ್ಪಣೆ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.</p>.<p>ಇಳಕಲ್ ಸೀರೆಯುಟ್ಟು, ಸಾಂಪ್ರದಾಯಿಕ ಆಭರಣ ಧರಿಸಿ ಬಂದ ಮಹಿಳೆಯರು ಪೂರ್ಣಕುಂಭ ಕಲಶ ಹೊತ್ತು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಿದರು.</p>.<p>ಅವರ ಹಿಂದೆ ವಿವಿಧ ವಾದ್ಯತಂಡಗಳು ನಡೆದವು. ಡೊಳ್ಳು ಕಲಾವಿದರು, ಹಲಗೆಯವರು, ಝಾಂಝ್ ಪಥಕ್, ತಾಸೆಮೇಳದ ತಂಡಗಳು ಮೆರವಣಿಗೆಗೆ ಮೆರಗು ತಂದವು. ಇವರ ಮಧ್ಯೆ ಸಾಗಿದ ಭಾರತಮಾತೆಯ ಭಾವಚಿತ್ರವಿರುವ ವಾಹನಕ್ಕೆ ಜನ ಪುಷ್ಪಾರ್ಚನೆ ಮಾಡಿದರು.</p>.<p>ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಸಮವಸ್ತ್ರಧಾರಿಗಳಾಗಿ ಹಾಡುತ್ತ, ನಲಿಯುತ್ತ ಹೆಜ್ಜೆ ಹಾಕಿದರು.</p>.<p>ಗೊಂಬೆ ವೇಷಧಾರಿಗಳು ಮಾರ್ಗದುದ್ದಕ್ಕೂ ವಾದ್ಯಮೇಳಗಳ ಸದ್ದಿಗೆ ತಕ್ಕಂತೆ ಕುಣಿದು ರಂಜಿಸಿದರು.</p>.<p>ರಾಣಿ ಚನ್ನಮ್ಮನ ವೃತ್ತದಿಂದ ಆರಂಭವಾದ ಮೆರವಣಿಗೆ ಐತಿಹಾಸಿಕ ಕೋಟೆ ಆವರಣದವರೆಗೂ ನಡೆಯಿತು.</p>.<p>ಶಾಸಕ ಮಹಾಂತೇಶ ದೊಡ್ಡಗೌಡ್ರ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ, ಉಪವಿಭಾಗಾಧಿಕಾರಿ ಶಶಿಧರ ಬಗಲಿ, ಕಿತ್ತೂರು ತಹಶೀಲ್ದಾರ್ ಸೋಮಪ್ಪ ಹಾಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಹಾಗೂ ಇತರೆ ಅಧಿಕಾರಿ ಸಿಬ್ಬಂದಿ ಕೂಡ ಹೆಜ್ಜೆ ಹಾಕಿದರು.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>