<p><strong>ಚಿಕ್ಕೋಡಿ</strong>: ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇಂಗಳಿ, ಯಕ್ಸಂಬಾ, ಯಡೂರವಾಡಿ ಗ್ರಾಮಗಳ 4 ಕಿರು ಏತ ನೀರಾವರಿ ಯೋಜನೆ ಮಂಜೂರಾಗಿದ್ದು, ಸರ್ಕಾರದ ಯೋಜನೆಗಳಿಂದ ಈ ಭಾಗದ ನೂರಾರು ರೈತರಿಗೆ ಅನುಕೂಲವಾಗಲಿದೆ" ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹೇಳಿದರು.</p>.<p>ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿ ₹ 2 ಕೋಟಿ ಮೊತ್ತದ 4 ಕಿರು ಏತ ನೀರಾವರಿ ಯೋಜನೆಗಳ ಮಂಜೂರಾತಿ ಪ್ರತಿಗಳನ್ನು ಶನಿವಾರ ಫಲಾನುಭವಿಗಳಿಗೆ ವಿತರಣೆ ಮಾಡಿ ಮಾತನಾಡಿದರು.</p>.<p>ರೈತರು ಒಣಬೇಸಾಯ ಜಮೀನುಗಳಿಗೆ ಕಿರು ಏತ ನೀರಾವರಿ ಯೋಜನೆ ಮಂಜೂರು ಮಾಡುವಂತೆ ವಿನಂತಿಸಿಕೊಂಡಿದ್ದರಿಂದ ಶಾಸಕ ಗಣೇಶ ಹುಕ್ಕೇರಿ ಹಾಗೂ ತಾನು ಪ್ರಯತ್ನ ಮಾಡಿ ಸರ್ಕಾರದಿಂದ ಯೋಜನೆ ಮಂಜೂರು ಮಾಡಿಕೊಂಡು ಬರಲಾಗಿದೆ" ಎಂದರು.</p>.<p>ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಕೃಷ್ಣಾ ಹಾಗೂ ದೂಧಗಂಗಾ ನದಿಗಳಿಂದ ಪೈಪ್ಲೈನ್ ಮೂಲಕ ಇಂಗಳಿ, ಯಕ್ಸಂಬಾ, ಯಡೂರವಾಡಿ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಒಟ್ಟು 159 ಎಕರೆ ಜಮೀನು ಈ ಯೋಜನೆಯಿಂದ ನೀರಾವರಿಗೊಳಪಡಲಿವೆ" ಎಂದು ಹೇಳಿದರು.</p>.<p>ಹೂವಣ್ಣ ಚೌಗಲೆ, ರಮೇಶ ಮುರಚೆಟ್ಟಿ, ಚಂದ್ರಕಾಂತ ಲಂಗೋಟೆ, ವಿಶ್ವನಾಥ ಮಾನೆ, ಸಂಜು ಪಿರಾಜಿ, ಅಜೀತ ಕಿಲ್ಲೇದಾರ, ಧನಗರ, ಶಿವಾಜಿ ಪವಾರ, ಗಣಪತಿ ಚಿನಮಣೆ, ಸದಾಶಿವ ಕುಂಬಾರ ಸೇರಿದಂತೆ ಇಂಗಳಿ, ಯಕ್ಸಂಬಾ, ಯಡೂರವಾಡಿ ಗ್ರಾಮಗಳ ರೈತ ಫಲಾನುಭವಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕೋಡಿ</strong>: ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇಂಗಳಿ, ಯಕ್ಸಂಬಾ, ಯಡೂರವಾಡಿ ಗ್ರಾಮಗಳ 4 ಕಿರು ಏತ ನೀರಾವರಿ ಯೋಜನೆ ಮಂಜೂರಾಗಿದ್ದು, ಸರ್ಕಾರದ ಯೋಜನೆಗಳಿಂದ ಈ ಭಾಗದ ನೂರಾರು ರೈತರಿಗೆ ಅನುಕೂಲವಾಗಲಿದೆ" ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹೇಳಿದರು.</p>.<p>ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿ ₹ 2 ಕೋಟಿ ಮೊತ್ತದ 4 ಕಿರು ಏತ ನೀರಾವರಿ ಯೋಜನೆಗಳ ಮಂಜೂರಾತಿ ಪ್ರತಿಗಳನ್ನು ಶನಿವಾರ ಫಲಾನುಭವಿಗಳಿಗೆ ವಿತರಣೆ ಮಾಡಿ ಮಾತನಾಡಿದರು.</p>.<p>ರೈತರು ಒಣಬೇಸಾಯ ಜಮೀನುಗಳಿಗೆ ಕಿರು ಏತ ನೀರಾವರಿ ಯೋಜನೆ ಮಂಜೂರು ಮಾಡುವಂತೆ ವಿನಂತಿಸಿಕೊಂಡಿದ್ದರಿಂದ ಶಾಸಕ ಗಣೇಶ ಹುಕ್ಕೇರಿ ಹಾಗೂ ತಾನು ಪ್ರಯತ್ನ ಮಾಡಿ ಸರ್ಕಾರದಿಂದ ಯೋಜನೆ ಮಂಜೂರು ಮಾಡಿಕೊಂಡು ಬರಲಾಗಿದೆ" ಎಂದರು.</p>.<p>ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಕೃಷ್ಣಾ ಹಾಗೂ ದೂಧಗಂಗಾ ನದಿಗಳಿಂದ ಪೈಪ್ಲೈನ್ ಮೂಲಕ ಇಂಗಳಿ, ಯಕ್ಸಂಬಾ, ಯಡೂರವಾಡಿ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಒಟ್ಟು 159 ಎಕರೆ ಜಮೀನು ಈ ಯೋಜನೆಯಿಂದ ನೀರಾವರಿಗೊಳಪಡಲಿವೆ" ಎಂದು ಹೇಳಿದರು.</p>.<p>ಹೂವಣ್ಣ ಚೌಗಲೆ, ರಮೇಶ ಮುರಚೆಟ್ಟಿ, ಚಂದ್ರಕಾಂತ ಲಂಗೋಟೆ, ವಿಶ್ವನಾಥ ಮಾನೆ, ಸಂಜು ಪಿರಾಜಿ, ಅಜೀತ ಕಿಲ್ಲೇದಾರ, ಧನಗರ, ಶಿವಾಜಿ ಪವಾರ, ಗಣಪತಿ ಚಿನಮಣೆ, ಸದಾಶಿವ ಕುಂಬಾರ ಸೇರಿದಂತೆ ಇಂಗಳಿ, ಯಕ್ಸಂಬಾ, ಯಡೂರವಾಡಿ ಗ್ರಾಮಗಳ ರೈತ ಫಲಾನುಭವಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>