ಚಿಕ್ಕೋಡಿ: ‘ವಿಶ್ವಜ್ಯೋತಿ ಬಸವಣ್ಣನವರು ಸಮಾನತೆ ಸಾರಿದ ಹರಿಕಾರರು. ಸಕಲರಿಗೆ ಲೇಸನ್ನೇ ಬಯಸುವ ತಮ್ಮ ವಚನಗಳ ಮನುಕುಲದ ಅಂತರಂಗದ ಕಣ್ಣು ತೆರೆಸಿದವರು’ ಎಂದು ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಪ್ರಕಾಶ ಜನಮಟ್ಟಿ ಹೇಳಿದರು.
ತಾಲ್ಲೂಕಿನ ಧುಳಗನವಾಡಿ ಗ್ರಾಮದಲ್ಲಿ ರಂಗದರ್ಶನ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಾಯಕ ತತ್ವ, ಜ್ಞಾನ ದಾಸೋಹ ಎಲ್ಲರಿಗೂ ಮಾರ್ಗಸೂಚಿಯಾಗಿದೆ. ಬಸವಣ್ಣನವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕು’ ಎಂದರು.
ಹಿರಿಯ ಕಲಾವಿದ ಬಾಬುಗೌಡ ಪಾಟೀಲ ಮಾತನಾಡಿ, ಬಸವಣ್ಣನವರು ರಚಿಸಿದ ವಚನಗಳು ಎಂದೆಂದಿಗೂ ದಾರಿದೀಪ ಎಂದರು.