ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಮಾತನಾಡಿ, ‘ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಸೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೆರವು ಒದಗಿಸಿದೆವು. ಆದರೆ ಇದಕ್ಕೂ ಮೊದಲು ವಿಷಯ ತಿಳಿದು ಸ್ಥಳಕ್ಕೆ ಬಂದ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದು, ಖಂಡನೀಯ’ ಎಂದ ಅವರು ಪೊಲೀಸರಿಗೆ, ವೈದ್ಯರಿಗೆ ಏಕವಚನದಲ್ಲಿ ಮಾತನಾಡಿದ್ದಾರೆ. ವ್ಯಕ್ತಿಯ ಚಿಕಿತ್ಸೆಗೆ ಮಾಹಿತಿ ತಿಳಿಸಿದವರಿಗೆ ‘ನೀವು ಲೀಡರ್ ಆಗೊಕೆ ಹೋಗಬೇಡಿ. ನಮ್ಗೂ ಗೊತ್ತು ಏನ ಮಾಡಬೇಕು. ನೀವ್ ಸುಮ್ನೆ ಇರಿ’ ಎಂದು ಬೇಜವಬ್ದಾರಿ ಉತ್ತರ ನೀಡಿದ್ದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳು ಅಮಾನವೀಯತೆಯಿಂದ ನಡೆದುಕೊಂಡಿರುವುದು ಖಂಡನೀಯ’ ಎಂದರು.