<p><strong>ಬೈಲಹೊಂಗಲ:</strong> ‘ಸರ್ಕಾರಿ ಯೋಜನೆಗಳನ್ನು ರೈತರಿಗೆ ಮುಟ್ಟಿಸುತ್ತಿರುವದರಿಂದ ಸಹಕಾರಿ ಸಂಘಗಳು ರೈತರ ಅಭಿವೃದ್ದಿಗೆ ಪೂರಕವಾಗಿದೆ’ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.</p>.<p>ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಂ.1ರ (ಎಲ್ಎಸ್ಎಂಪಿ) 85ನೇ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.</p>.<p>‘ಸಂಘವು ₹15 ಕೋಟಿ ಬಂಡವಾಳದೊಂದಿಗೆ ರೈತರಿಗೆ ನೆರವಾಗುತ್ತಾ, 28 ಲಕ್ಷ ಮಿಕ್ಕಿ ಲಾಭ ಹೊಂದಿ, ರೈತ ಸದಸ್ಯರಿಗೆ ಶೇ 10 ಡಿವಿಡಂಡ್ ನೀಡುತ್ತಿರುವದು ಆಡಳಿತ ಮಂಡಳಿ, ಸಿಬ್ಬಂದಿಯ ಪ್ರಾಮಾಣಿಕ ಪರಿಶ್ರಮಕ್ಕೆ ಸಾಕ್ಷಿಯಾಗಿದೆ’ ಎಂದರು.</p>.<p>ರೈತ ಮುಖಂಡ ಶಂಕರೆಪ್ಪ ಯಡಳ್ಳಿ ಮಾತನಾಡಿ, ‘ಅನ್ನ ನೀಡುವ ರೈತರ ಅಭಿವೃದ್ದಿಯೇ ದೇಶದ ಅಭಿವೃದ್ದಿಯಾಗಿದ್ದು, ಸರಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು' ಎಂದರು.</p>.<p>ಸಾವಯವ ಕೃಷಿಕ ಬಾಬು ಪಾಟೀಲ, ನಿವೃತ್ತ ಶಿಕ್ಷಕ ಬಸವರಾಜ ಭರಮಣ್ಣವರ, ಪ್ರಗತಿಪರ ರೈತ ಪುಂಡಲೀಕ ಇಂಚಲ ಸಲಹೆ ಸೂಚನೆ ನೀಡಿದರು.</p>.<p>ಸಂಘದ ವ್ಯವಸ್ಥಾಪಕ ಬಸವರಾಜ ವಾಲಿ ವರದಿ ಮಂಡಿಸಿ, ಸಂಘವು ₹10 ಕೋಟಿ ಸಾಲ ವಿತರಿಸಿದೆ. ₹1 ಕೋಟಿ 40 ಲಕ್ಷ ಷೇರು ಬಂಡವಾಳ ಹೊಂದಿದೆ. ಸಂಘದಿಂದ ಬೀಜ, ಗೊಬ್ಬರ ವಿತರಿಸಲು ಕೇಂದ್ರ ಸರ್ಕಾರದಿಂದ ಲೈಸನ್ಸ್ ಹೊಂದಲಾಗುತ್ತಿದ್ದು, ಶಿಘ್ರ ಪ್ರಾರಂಭಿಸಲಾಗುವುದು ಎಂದರು.</p>.<p>ನಿರ್ದೇಶಕ ಬಸವರಾಜ ಕಲಾದಗಿ ಮಾತನಾಡಿದರು. ಸಂಘದ ಅಧ್ಯಕ್ಷ ಪಾಂಡಪ್ಪ ಇಂಚಲ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.</p>.<p>ಹಿರಿಯರಾದ ಮಲ್ಲಿಕಾರ್ಜುನ ಬೋಳನ್ನವರ, ಶಂಕರೆಪ್ಪ ತುರಮರಿ, ಮರ್ಚಂಟ್ಸ್ ಬ್ಯಾಂಕ್ ಅಧ್ಯಕ್ಷ ಬಸಣ್ಣ ಮೂಗಿ, ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ, ಡಿಸಿಸಿ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಶಿವನಗೌಡ ಮುದಕನಗೌಡರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೈಲಹೊಂಗಲ:</strong> ‘ಸರ್ಕಾರಿ ಯೋಜನೆಗಳನ್ನು ರೈತರಿಗೆ ಮುಟ್ಟಿಸುತ್ತಿರುವದರಿಂದ ಸಹಕಾರಿ ಸಂಘಗಳು ರೈತರ ಅಭಿವೃದ್ದಿಗೆ ಪೂರಕವಾಗಿದೆ’ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.</p>.<p>ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಂ.1ರ (ಎಲ್ಎಸ್ಎಂಪಿ) 85ನೇ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.</p>.<p>‘ಸಂಘವು ₹15 ಕೋಟಿ ಬಂಡವಾಳದೊಂದಿಗೆ ರೈತರಿಗೆ ನೆರವಾಗುತ್ತಾ, 28 ಲಕ್ಷ ಮಿಕ್ಕಿ ಲಾಭ ಹೊಂದಿ, ರೈತ ಸದಸ್ಯರಿಗೆ ಶೇ 10 ಡಿವಿಡಂಡ್ ನೀಡುತ್ತಿರುವದು ಆಡಳಿತ ಮಂಡಳಿ, ಸಿಬ್ಬಂದಿಯ ಪ್ರಾಮಾಣಿಕ ಪರಿಶ್ರಮಕ್ಕೆ ಸಾಕ್ಷಿಯಾಗಿದೆ’ ಎಂದರು.</p>.<p>ರೈತ ಮುಖಂಡ ಶಂಕರೆಪ್ಪ ಯಡಳ್ಳಿ ಮಾತನಾಡಿ, ‘ಅನ್ನ ನೀಡುವ ರೈತರ ಅಭಿವೃದ್ದಿಯೇ ದೇಶದ ಅಭಿವೃದ್ದಿಯಾಗಿದ್ದು, ಸರಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು' ಎಂದರು.</p>.<p>ಸಾವಯವ ಕೃಷಿಕ ಬಾಬು ಪಾಟೀಲ, ನಿವೃತ್ತ ಶಿಕ್ಷಕ ಬಸವರಾಜ ಭರಮಣ್ಣವರ, ಪ್ರಗತಿಪರ ರೈತ ಪುಂಡಲೀಕ ಇಂಚಲ ಸಲಹೆ ಸೂಚನೆ ನೀಡಿದರು.</p>.<p>ಸಂಘದ ವ್ಯವಸ್ಥಾಪಕ ಬಸವರಾಜ ವಾಲಿ ವರದಿ ಮಂಡಿಸಿ, ಸಂಘವು ₹10 ಕೋಟಿ ಸಾಲ ವಿತರಿಸಿದೆ. ₹1 ಕೋಟಿ 40 ಲಕ್ಷ ಷೇರು ಬಂಡವಾಳ ಹೊಂದಿದೆ. ಸಂಘದಿಂದ ಬೀಜ, ಗೊಬ್ಬರ ವಿತರಿಸಲು ಕೇಂದ್ರ ಸರ್ಕಾರದಿಂದ ಲೈಸನ್ಸ್ ಹೊಂದಲಾಗುತ್ತಿದ್ದು, ಶಿಘ್ರ ಪ್ರಾರಂಭಿಸಲಾಗುವುದು ಎಂದರು.</p>.<p>ನಿರ್ದೇಶಕ ಬಸವರಾಜ ಕಲಾದಗಿ ಮಾತನಾಡಿದರು. ಸಂಘದ ಅಧ್ಯಕ್ಷ ಪಾಂಡಪ್ಪ ಇಂಚಲ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.</p>.<p>ಹಿರಿಯರಾದ ಮಲ್ಲಿಕಾರ್ಜುನ ಬೋಳನ್ನವರ, ಶಂಕರೆಪ್ಪ ತುರಮರಿ, ಮರ್ಚಂಟ್ಸ್ ಬ್ಯಾಂಕ್ ಅಧ್ಯಕ್ಷ ಬಸಣ್ಣ ಮೂಗಿ, ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ, ಡಿಸಿಸಿ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಶಿವನಗೌಡ ಮುದಕನಗೌಡರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>