‘ಗರ್ದಿ ಗಮ್ಮತ್ತಿನಲ್ಲಿ ನಾವ್ಯಾರೂ ಸೋಲಬಾರದು. ಅವರು ತಾಜ್ಮಹಲ್, ಕುತುಬ್ ಮಿನಾರ್, ನಿಜಾಮ್ ಕೋಟೆ, ಮೈಸೂರು ಅರಮನೆ ಮೊದಲಾದ ಯಾವುದೇ ಚಿತ್ರ ತೋರಿಸಲಿ; ನೀವು ಬದಲಾಗಬಾರದು. ಆ ವ್ಯಕ್ತಿ ಶಾಮ ಘಾಟಗೆ ಸೇರಿ ನಮ್ಮ ಮುಖಂಡರ ಮನೆಗೆ ಎಷ್ಟು ಬಾರಿ ಬರುತ್ತಾರೋ ಗೊತ್ತಿಲ್ಲ’ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೆಸರು ಹೇಳದೆ ಟೀಕಿಸಿದರು. ‘ಯಾರಾದರೂ ಮನೆಗೆ ಬಂದರೆ ಬರಬೇಡಿ ಎನ್ನಲಾದೀತೇ?’ ಎಂದೂ ಕೇಳಿದರು.