ಬೆಳಗಾವಿ ತಾಲ್ಲೂಕಿನ ಯಳ್ಳೂರು ಗ್ರಾಮದ ಭತ್ತದ ಗದ್ದೆಗಳಿಗೆ ನಿಗ್ಗಿದ ಬಳ್ಳಾರಿ ನಾಲೆಯ ನೀರು ಪ್ರಜಾವಾಣಿ ಚಿತ್ರ
ಇವರೇನಂತಾರೆ?
ಈ ವರ್ಷ ಎರಡೂವರೆ ಎಕರೆಯಲ್ಲಿ ಭತ್ತ ಬಿತ್ತಿದ್ದೇವೆ. ಕಳೆದ ಹತ್ತು ದಿನಗಳಿಂದ ಬೆಳೆ ಮುಳುಗುವಷ್ಟು ನೀರು ನಿಂತಿದೆ. ಕಳೆದ ವರ್ಷವೂ ಇದೇ ಪರಿಸ್ಥಿತಿ ಎದುರಾಗಿ ಎರಡನೇ ಬಾರಿ ಬಿತ್ತನೆ ಮಾಡಿದ್ದೇವು. ಈಗ ಮತ್ತೆ ಅದೇ ಪರಿಸ್ಥಿತಿ ಎದುರಾಗಿದೆ.
– ಮನೋಹರ ಧಾಮನೆ ರೈತ
ಬಳ್ಳಾರಿ ನಾಲೆ ನಂಬಿಕೊಂಡೇ ನಾವು ಕೃಷಿ ಮಾಡುತ್ತ ಬಂದಿದ್ದೇವೆ. ಅವೈಜ್ಞಾನಿಕ ಕಾಮಗಾರಿ ಮಾಡಿದ ಪರಿಣಾಮ ರೈತರು ಸಂಕಷ್ಟ ಎದುರಿಸುವಂತಾಗಿದೆ. ಈ ವರ್ಷವೂ 2000 ಎಕರೆಗೂ ಹೆಚ್ಚು ಪ್ರದೇಶ ನೀರಿನಲ್ಲಿ ನಿಂತಿದೆ. ಇದೆಲ್ಲಕ್ಕೂ ಸರ್ಕಾರವೇ ಹೊಣೆ. ಕೂಡಲೇ ಪರಿಹಾರ ನೀಡಬೇಕು.
– ಸುರೇಶಪ್ಪ ಕಡಬಿ ರೈತ
ಬಳ್ಳಾರಿ ನಾಲೆಯ ಹಿನ್ನೀರಿನಿಂದ 34 ಹೆಕ್ಟೆರ್ ಪ್ರದೇಶದಲ್ಲಿ ನೀರು ನಿಂತಿದೆ. ಜಲಾವೃತವಾದ ಗದ್ದೆಯಲ್ಲಿ ಸುಳಿಯ ಒಳಗೆ ನೀರು ಹೋಗಬಾರದು. ಈಗಾಗಲೇ ಮಳೆ ತುಸು ಬಿಡುವು ನೀಡಿದ್ದು ಭತ್ತದ ಬೆಳೆ ಅಪಾಯದಿಂದ ಪಾರಾಗುವ ಸಾಧ್ಯತೆ ಇದೆ. ರೈತರು ಆತಂಕ ಪಡಬೇಕಾಗಿಲ್ಲ. ಕೂರಿಗೆ ಬಿತ್ತನೆ ಮಾಡಿದವರ ಬೆಳೆ ಹಾಳಾದರೆ ಸೂಕ್ತ ಪರಿಹಾರ ಕೂಡ ಸಿಗಲಿದೆ.
– ಎಚ್.ಡಿ. ಕೋಳೇಕರ ಜಂಟಿ ಕೃಷಿ ನಿರ್ದೇಶಕ
ಭತ್ತಕ್ಕೆ ಹೆಚ್ಚಿನ ನೀರು ಬೇಕು. ಆದರೆ ಸುಳಿಯಲ್ಲಿ ನೀರು ಹೋದರೆ ಹಾಳಾಗುತ್ತದೆ. ಐದಾರು ದಿನಗಳ ಕಾಲ ಗದ್ದೆಯಲ್ಲಿ ನೀರು ಸಂಗ್ರಹವಾಗದಂತೆ ರೈತರು ಜರಿ ಮಾಡಿ ನೀರನ್ನು ಹರಿಸಬೇಕು. ಜುಲೈ 2ರವರೆಗೂ ಮಳೆ ಬಿಡುವು ನೀಡಲಿದೆ. ನಂತರ ಮತ್ತೆ ಜೋರಾಗಿ ಬೀಳುವ ಸಾಧ್ಯತೆ ಇದೆ.
– ಜಿ.ಬಿ.ವಿಶ್ವನಾಥ ಕೃಷಿ ವಿಜ್ಞಾನಿ ಐಸಿಆರ್– ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ