'ತಾಂತ್ರಿಕತೆ ಇಂದು ಬಹು ವಿಸ್ತಾರ ಪಡೆದುಕೊಂಡಿದೆ. ಇದರಲ್ಲಿ ಸಾಧನೆ ಮಾಡುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಪ್ರಯೋಗಶೀಲತೆಯಿಂದ ಕೌಶಲವೃದ್ಧಿಯಾಗುತ್ತದೆ. ವಿದ್ಯಾರ್ಥಿ ಜೀವನದ ಸುವರ್ಣ ಅವಕಾಶವನ್ನು ವ್ಯರ್ಥವಾಗಿ ಕಳೆಯದೇ, ನಿರಂತರ ಪರಿಶ್ರಮದಿಂದ ವೈಯುಕ್ತಿಕ ಭವಿಷ್ಯ ರೂಪಿಸಿಕೊಳ್ಳುವ ಜೊತೆಗೆ ಸಮಾಜದ ಅಭ್ಯುದಯಕ್ಕೂ ತಮ್ಮದೇ ಆದ ಕೊಡುಗೆ ನೀಡಬೇಕು. ಜೀವನದಲ್ಲಿ ಆಧ್ಯಾತ್ಮಿಕತೆ, ಸಂಸ್ಕಾರ, ಸಂಸ್ಕೃತಿಯನ್ನೂ ಅಳವಡಿಸಿಕೊಂಡು ಸಾತ್ವಿಕ ಬದುಕು ನಡೆಸಬೇಕು' ಎಂದು ಸ್ವಾಮೀಜಿ ಸಲಹೆ ನೀಡಿದರು.