ಒಂದೊಮ್ಮೆ ಕೋವಿಡ್ ದೃಢಪಟ್ಟರೂ, ಧೃತಿಗೆಡಬಾರದು. ಮಾನಸಿಕವಾಗಿ ಗಟ್ಟಿಯಾಗಿರಬೇಕು. ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಮಾಸ್ಕ್ ಧರಿಸಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ಸ್ವಚ್ಛತೆಗೆ ಗಮನ ಕೊಡಬೇಕು. ಔಷಧಿಯು ಅರ್ಧ ಗುಣಪಡಿಸಿದರೆ ನಮ್ಮ ಧೈರ್ಯ ಇನ್ನರ್ಧ ಗುಣಪಡಿಸುತ್ತದೆ. ಸೋಂಕಿತರಿಗೆ ಕುಟುಂಬದವರೂ ಬೆಂಬಲವಾಗಿ ನಿಲ್ಲಬೇಕು. ಸಮಾಜ ಕಡೆಗಣಿಸಬಾರದು. ಜನರು ವದಂತಿಗಳಿಗೆ ಕಿವಿಕೊಡಬಾರದು.
–ಜ್ಯೋತಿ ಹೊಸಟ್ಟಿ, ಶಾಹೂನಗರ, ಬೆಳಗಾವಿ