<p><strong>ಅಥಣಿ (ಬೆಳಗಾವಿ ಜಿಲ್ಲೆ):</strong> ‘ಕೋವಿಡ್ 3ನೇ ಅಲೆ ಬಾರದಂತೆ ತಡೆಯಲು ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯ ಸಹಕಾರ್ಯವಾಹಿಕಾ ಅಲಕಾತಾಯಿ ಇನಾಮದಾರ ಹೇಳಿದರು.</p>.<p>ರಾಷ್ಟ್ರ ಸೇವಿಕಾ ಸಮಿತಿಯಿಂದ ಗುರುವಾರ ಆನ್ಲೈನ್ನಲ್ಲಿ ನಡೆದ ‘ವೈದ್ಯರ ಮಿಲನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸೋಂಕು ಮಕ್ಕಳನ್ನು ಬಾಧಿಸುವ ವರದಿಗಳಿರುವುದರಿಂದಾಗಿ ಸಮಿತಿಯಿಂದ ತಾಯಂದಿರಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ. ವೈದ್ಯೆಯರ ಮೂಲಕ ಮಾರ್ಗದರ್ಶನ ಮಾಡಿಸಲಾಗುವುದು. ಯಾವ ರೀತಿ ಎಚ್ಚರಿಕೆ ವಹಿಸಬೇಕು, ಆಹಾರದಲ್ಲಿ ಯಾವ ಅಂಶಗಳ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು ಎಂಬಿತ್ಯಾದಿ ವಿಷಯಗಳನ್ನು ತಿಳಿಸಲಾಗುವುದು’ ಎಂದರು.</p>.<p>ಚಿಕ್ಕೋಡಿ, ಅಥಣಿ, ರಾಯಬಾಗ, ಸದಲಗಾ, ಹುಕ್ಕೇರಿ, ಗೋಕಾಕ, ಸಂಕೆಶ್ವರ, ಘಟಪ್ರಭಾ, ತುಕಾನಟ್ಟಿ ಹಾರೂಗೇರಿಯ ವೈದ್ಯೆಯರು ಪಾಲ್ಗೊಂಡಿದ್ದರು.</p>.<p>ಸಮಿತಿಯ ಕರ್ನಾಟಕ ಉತ್ತರ ಪ್ರಾಂತ ಕಾರ್ಯವಾಹಿಕಾ ವೇದಾ ಕುಲಕರ್ಣಿ, ಸಂಪರ್ಕ ಪ್ರಮುಖರಾದ ವಾಣಿ ರಮೇಶ, ಡಾ.ಮನೀಶಾ ಭಾಂಡಣಕರ, ಡಾ.ಜ್ಯೋತಿ ಚಿಂಚಣಿಕರ, ಶಾಂಭವಿ ಅಶ್ವತ್ಥಪುರ, ಗೀತಾ ಮೇತ್ರಿ ಭಾಗವಹಿಸಿದ್ದರು.</p>.<p>ಮೃಣಾಲಿನಿ ದೇಶಪಾಂಡೆ ನಿರೂಪಿಸಿದರು. ಅನುಪಾ ಕೌಶಿಕ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಥಣಿ (ಬೆಳಗಾವಿ ಜಿಲ್ಲೆ):</strong> ‘ಕೋವಿಡ್ 3ನೇ ಅಲೆ ಬಾರದಂತೆ ತಡೆಯಲು ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯ ಸಹಕಾರ್ಯವಾಹಿಕಾ ಅಲಕಾತಾಯಿ ಇನಾಮದಾರ ಹೇಳಿದರು.</p>.<p>ರಾಷ್ಟ್ರ ಸೇವಿಕಾ ಸಮಿತಿಯಿಂದ ಗುರುವಾರ ಆನ್ಲೈನ್ನಲ್ಲಿ ನಡೆದ ‘ವೈದ್ಯರ ಮಿಲನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸೋಂಕು ಮಕ್ಕಳನ್ನು ಬಾಧಿಸುವ ವರದಿಗಳಿರುವುದರಿಂದಾಗಿ ಸಮಿತಿಯಿಂದ ತಾಯಂದಿರಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ. ವೈದ್ಯೆಯರ ಮೂಲಕ ಮಾರ್ಗದರ್ಶನ ಮಾಡಿಸಲಾಗುವುದು. ಯಾವ ರೀತಿ ಎಚ್ಚರಿಕೆ ವಹಿಸಬೇಕು, ಆಹಾರದಲ್ಲಿ ಯಾವ ಅಂಶಗಳ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು ಎಂಬಿತ್ಯಾದಿ ವಿಷಯಗಳನ್ನು ತಿಳಿಸಲಾಗುವುದು’ ಎಂದರು.</p>.<p>ಚಿಕ್ಕೋಡಿ, ಅಥಣಿ, ರಾಯಬಾಗ, ಸದಲಗಾ, ಹುಕ್ಕೇರಿ, ಗೋಕಾಕ, ಸಂಕೆಶ್ವರ, ಘಟಪ್ರಭಾ, ತುಕಾನಟ್ಟಿ ಹಾರೂಗೇರಿಯ ವೈದ್ಯೆಯರು ಪಾಲ್ಗೊಂಡಿದ್ದರು.</p>.<p>ಸಮಿತಿಯ ಕರ್ನಾಟಕ ಉತ್ತರ ಪ್ರಾಂತ ಕಾರ್ಯವಾಹಿಕಾ ವೇದಾ ಕುಲಕರ್ಣಿ, ಸಂಪರ್ಕ ಪ್ರಮುಖರಾದ ವಾಣಿ ರಮೇಶ, ಡಾ.ಮನೀಶಾ ಭಾಂಡಣಕರ, ಡಾ.ಜ್ಯೋತಿ ಚಿಂಚಣಿಕರ, ಶಾಂಭವಿ ಅಶ್ವತ್ಥಪುರ, ಗೀತಾ ಮೇತ್ರಿ ಭಾಗವಹಿಸಿದ್ದರು.</p>.<p>ಮೃಣಾಲಿನಿ ದೇಶಪಾಂಡೆ ನಿರೂಪಿಸಿದರು. ಅನುಪಾ ಕೌಶಿಕ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>