ಅಂಕಲಗಿ: ಬಳ್ಳಾರಿ ನಾಲೆ ಉಕ್ಕಿ ಹರಿದಿದ್ದರಿಂದ ಅಕ್ಕತಂಗೇರಹಾಳ, ಹುದಲಿ, ಸುಲಧಾಳ, ಬೂದಿಹಾಳ, ಯದ್ದಲಗುಡ್ಡ, ಲಗಮೇಶ್ವರ, ಅಂಕಲಗಿ, ಡುಮ್ಮಉರಬಿನಹಟ್ಟಿ, ದಾಸನಟ್ಟಿ, ಕುಂದರಗಿ ಗ್ರಾಮಗಳ ವ್ಯಾಪ್ತಿಯಲ್ಲಿ ನೂರಾರು ಎಕರೆ ಗೋವಿನಜೋಳ, ಸೋಯಾಅವರೆ ಮೊದಲಾದ ಬೆಳೆಗಳು ನೀರು ಪಾಲಾಗಿವೆ.
ಅಲ್ಲಲ್ಲಿ ತರಕಾರಿ ಬೆಳೆಗಳು ಸಂಪೂರ್ಣ ನಾಶವಾಗಿವೆ. ಅಕ್ಕತಂಗೇರಹಾಳದ ಪ್ರಗತಿಪರ ಕೃಷಿಕ ಬಸವಂತ ಈಶ್ವರಪ್ಪಗೋಳ ಅವರು ಒಂದು ಎಕರೆಯಲ್ಲಿ ಕೊತ್ತಂಬರಿ ಬೆಳೆದಿದ್ದರು. ‘ಬೆಳೆ ಮುಳುಗಿದ್ದು, ಅಪಾರ ಹಾನಿ ಸಂಭವಿಸಿದೆ’ ಎಂದು ತಿಳಿಸಿದರು.
ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.