<p><strong>ಖಾನಾಪುರ</strong> (ಬೆಳಗಾವಿ ಜಿಲ್ಲೆ): ಸಿ.ಟಿ.ರವಿ ಅವರನ್ನು ವಿಚಾರಣೆಗಾಗಿ ಖಾನಾಪುರ ಠಾಣೆಗೆ ಕರೆತಂದಾಗ (ಡಿ.19ರಂದು) ಬಿಜೆಪಿ ಮುಖಂಡರಿಗೆ ಠಾಣೆಯೊಳಗೆ ಬರಲು ಅನುಮತಿ ನೀಡಿ ಕರ್ತವ್ಯಲೋಪ ಎಸಗಿದ ಆರೋಪದಡಿ, ಇನ್ಸ್ಪೆಕ್ಟರ್ ಮಂಜುನಾಥ ನಾಯ್ಕ ಅವರನ್ನು ಅಮಾನತುಗೊಳಿಸಿ ಉತ್ತರವಲಯ ಐಜಿಪಿ ವಿಕಾಶಕುಮಾರ ವಿಕಾಶ ಆದೇಶ ಹೊರಡಿಸಿದ್ದಾರೆ.</p><p>ಅಮಾನತು ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ, ತಾಲ್ಲೂಕಿನ ವಿವಿಧ ಸಂಘಟನೆಯವರು ಶುಕ್ರವಾರ (ಡಿ.27) ಖಾನಾಪುರ ಬಂದ್ಗೆ ಕರೆ ಕೊಟ್ಟಿದ್ದಾರೆ.</p><p>‘ಮಂಜುನಾಥ ನಾಯ್ಕ ವಿವಿಧ ಸಮುದಾಯದವರು, ರಾಜಕೀಯ ಪಕ್ಷದವರು ಮತ್ತು ಸಂಘ-ಸಂಸ್ಥೆಗಳ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇಂಥ ದಕ್ಷ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಬಾರದು’ ಎಂದು ದಲಿತ ಸಂಘರ್ಷ ಸಮಿತಿ (ಸಂಯೋಜಕ) ಸಂಘಟನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹಿಂಡಲಗಿ ಆಗ್ರಹಿಸಿದ್ದಾರೆ.</p><p>‘ಪ್ರಕರಣದ ಸಂಬಂಧ ಇಲಾಖೆ ಮಟ್ಟದಲ್ಲೇ ನ್ಯಾಯ ಸಿಗುವ ವಿಶ್ವಾಸವಿದೆ. ಯಾರೂ ಬಂದ್ಗೆ ಕರೆ ಕೊಡಬಾರದು ಅಥವಾ ಪ್ರತಿಭಟಿಸಬಾರದು’ ಎಂದು ಮಂಜುನಾಥ ನಾಯ್ಕ ಅವರು ವಿಡಿಯೊ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಖಾನಾಪುರ</strong> (ಬೆಳಗಾವಿ ಜಿಲ್ಲೆ): ಸಿ.ಟಿ.ರವಿ ಅವರನ್ನು ವಿಚಾರಣೆಗಾಗಿ ಖಾನಾಪುರ ಠಾಣೆಗೆ ಕರೆತಂದಾಗ (ಡಿ.19ರಂದು) ಬಿಜೆಪಿ ಮುಖಂಡರಿಗೆ ಠಾಣೆಯೊಳಗೆ ಬರಲು ಅನುಮತಿ ನೀಡಿ ಕರ್ತವ್ಯಲೋಪ ಎಸಗಿದ ಆರೋಪದಡಿ, ಇನ್ಸ್ಪೆಕ್ಟರ್ ಮಂಜುನಾಥ ನಾಯ್ಕ ಅವರನ್ನು ಅಮಾನತುಗೊಳಿಸಿ ಉತ್ತರವಲಯ ಐಜಿಪಿ ವಿಕಾಶಕುಮಾರ ವಿಕಾಶ ಆದೇಶ ಹೊರಡಿಸಿದ್ದಾರೆ.</p><p>ಅಮಾನತು ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ, ತಾಲ್ಲೂಕಿನ ವಿವಿಧ ಸಂಘಟನೆಯವರು ಶುಕ್ರವಾರ (ಡಿ.27) ಖಾನಾಪುರ ಬಂದ್ಗೆ ಕರೆ ಕೊಟ್ಟಿದ್ದಾರೆ.</p><p>‘ಮಂಜುನಾಥ ನಾಯ್ಕ ವಿವಿಧ ಸಮುದಾಯದವರು, ರಾಜಕೀಯ ಪಕ್ಷದವರು ಮತ್ತು ಸಂಘ-ಸಂಸ್ಥೆಗಳ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇಂಥ ದಕ್ಷ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಬಾರದು’ ಎಂದು ದಲಿತ ಸಂಘರ್ಷ ಸಮಿತಿ (ಸಂಯೋಜಕ) ಸಂಘಟನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹಿಂಡಲಗಿ ಆಗ್ರಹಿಸಿದ್ದಾರೆ.</p><p>‘ಪ್ರಕರಣದ ಸಂಬಂಧ ಇಲಾಖೆ ಮಟ್ಟದಲ್ಲೇ ನ್ಯಾಯ ಸಿಗುವ ವಿಶ್ವಾಸವಿದೆ. ಯಾರೂ ಬಂದ್ಗೆ ಕರೆ ಕೊಡಬಾರದು ಅಥವಾ ಪ್ರತಿಭಟಿಸಬಾರದು’ ಎಂದು ಮಂಜುನಾಥ ನಾಯ್ಕ ಅವರು ವಿಡಿಯೊ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>