‘ಕೃಷಿ ಉತ್ಪನ್ನಗಳ ಮಾರಾಟ, ಆಸ್ಪತ್ರೆಗಳು, ವ್ಯಾಪಾರ–ವಹಿವಾಟು ಮೊದಲಾದ ವಿಷಯಗಳಿಗೆ ಬೆಳಗಾವಿ ನಗರವನ್ನು ಅವಲಂಬಿಸಿದ್ದೇವೆ. ಕೋವಿಡ್–19 ತಡೆಯುವ ನೆಪದಲ್ಲಿ ಚೆಕ್ಪೋಸ್ಟ್ ಸ್ಥಾಪಿಸಿ ಸಂಚಾರ ನಿರ್ಬಂಧಿಸಲಾಗಿದೆ. ಬೆಳಗಾವಿಗೆ ಹೋಗುವ ನಾವು ನಿತ್ಯವೂ ಕೋವಿಡ್ ನೆಗೆಟಿವ್ ವರದಿ ಪ್ರಸ್ತುತಪಡಿಸುವುದು ಕಷ್ಟಸಾಧ್ಯವಾಗಿದೆ. ನಾವು ಕೊಲ್ಹಾಪುರಕ್ಕೆ ಹೋಗುವುದಕ್ಕೂ ಇದೇ ರಸ್ತೆ ಅವಲಂಬಿಸಿದ್ದೇವೆ. ಹೀಗಾಗಿ, ಕರ್ನಾಟಕ ಪೊಲೀಸರು ಈ ಭಾಗದ ಜನರಿಗೆ ವಿನಾಯಿತಿ ಕೊಡಬೇಕು’ ಎಂದು ಒತ್ತಾಯಿಸಿದರು.