‘ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಕಾರ್ಮಿಕ ಕಲ್ಯಾಣ ಮಂಡಳಿಯವರು ದಿನಸಿ ಕಿಟ್ಗಳನ್ನು ನೀಡಬೇಕಾಗಿದೆ. ಆದರೆ, ಕಾರ್ಮಿಕ ಇಲಾಖೆಯವರು ಪದಾರ್ಥಗಳನ್ನು ಜನಪ್ರತಿನಿಧಿಗಳ ಗೋದಾಮಿನಲ್ಲಿ ಇರಿಸಿದ್ದಾರೆ. ಅವರ ಮೂಲಕವೇ ಹಂಚಿಕೆ ನಡೆಯುತ್ತಿದೆ. ಹೋದ ವರ್ಷ ಇದೇ ರೀತಿ ಜನಪ್ರತಿನಿಧಿಗಳ ಸ್ವಾಧೀನಕ್ಕೆ ಕಿಟ್ಗಳನ್ನು ನೀಡಿದ್ದರಿಂದಾಗಿ ಬಹಳಷ್ಟು ಕಾರ್ಮಿಕರಿಗೆ ಸರ್ಕಾರದ ಸೌಲಭ್ಯ ಸಮರ್ಪಕವಾಗಿ ದೊರೆತಿರಲಿಲ್ಲ’ ಎಂದು ಸಂಘದ ಅಧ್ಯಕ್ಷ, ವಕೀಲ ಎನ್.ಆರ್. ಲಾತೂರ ಆರೋಪಿಸಿದರು.