‘107 ಕಿ.ಮೀ. ಉದ್ದದ ಘಟಪ್ರಭಾ ಎಡದಂಡೆ ಕಾಲುವೆಗೆ ಶನಿವಾರ 2,400 ಕ್ಯುಸೆಕ್ ನೀರು ಹರಿಬಿಡಲಾಗುತ್ತಿದ್ದು, ಎರಡು ಕಡೆಗಳಲ್ಲಿ (5ನೇ ಕಿ.ಮೀ. ಹಾಗೂ 7ನೇ ಕಿ.ಮೀ.) ನಾಲೆ ಪಕ್ಕದ ರಸ್ತೆ ಶಿಥಿಲಗೊಂಡಿದೆ. ಒಂದು ವೇಳೆ ಅದು ಒಡೆದರೆ ಹೊಲಗಳು ಮತ್ತು ಮನೆಗಳು ಮುಳುಗಿ ಜನರು ಬೀದಿಗೆ ಬೀಳುತ್ತಾರೆ. ಆ ರಸ್ತೆಯಲ್ಲಿ ನಿತ್ಯ ನೂರಾರು ರೈತರು ಸಂಚರಿಸುತ್ತಾರೆ. ಈಗ ಲಾಕ್ಡೌನ್ ಕಾರಣಕ್ಕೆ ಪೋಲಿಸರ ಕಣ್ಣು ತಪ್ಪಿಸಲು ಸಾಕಷ್ಟು ಜನ ಇದೇ ಮಾರ್ಗ ಅವಲಂಬಿಸಿದ್ದಾರೆ. ರಸ್ತೆ ಒಡೆದಿರುವ ಕುರಿತು ಯಾವುದೇ ಸೂಚನಾ ಫಲಕ ಹಾಕಿಲ್ಲ. ಬ್ಯಾರಿಕೇಡ್ ಕೂಡ ಇಟ್ಟಿಲ್ಲ. ಯಾರಾದರೂ ಅಪ್ಪಿತಪ್ಪಿ ಬಿದ್ದರೆ ಸಾವು ನಿಶ್ಚಿತ. ಅಧಿಕಾರಿಗಳು ಇತ್ತ ಗಮನಹರಿಸಬೇಕು’ ಎಂದು ಒತ್ತಾಯಿಸಿದ್ದಾರೆ.