<p><strong>ಬೆಳಗಾವಿ</strong>: ‘ಬಿಜೆಪಿಯವರು ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ‘ಗಾಂಧಿ ಭಾರತ’ ಕಾರ್ಯಕ್ರಮದ ಯಶಸ್ಸು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರ ಹೊಟ್ಟೆಕಿಚ್ಚಿಗೆ ನಮ್ಮಲ್ಲಿ ಮದ್ದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.</p>.<p>‘ಕಾಂಗ್ರೆಸ್ನ ಕೆಲ ಬ್ಯಾನರುಗಳಲ್ಲಿ ಭಾರತದ ನಕ್ಷೆಯನ್ನು ತಿರುಚಿ ಅಪಮಾನ ಮಾಡಲಾಗಿದೆ’ ಎಂಬ ಬಿಜೆಪಿ ನಾಯಕರ ಆರೋಪಕ್ಕೆ, ನಗರದಲ್ಲಿ ಗುರುವಾರ ಅವರು ಪ್ರತಿಕ್ರಿಯೆ ನೀಡಿದರು.</p>.<p>‘ಮಾಹಿತಿ ಕೊರತೆಯಿಂದ ಕೆಲ ನಾಯಕರು ಗಮನಿಸದೇ ಹಾಗೆ ಮಾಡಿದ್ದಾರೆ. ಈಗಾಗಲೇ ಅಂಥ ಕಟೌಟು, ಬ್ಯಾನರುಗಳನ್ನು ತೆಗೆಸಿದ್ದೇವೆ. ಈ ಸಂಭ್ರಮದ ಮಧ್ಯೆ ಇಂಥವಕ್ಕೆ ದೊಡ್ಡ ಮಹತ್ವ ಕೊಡಬಾರದು’ ಎಂದರು.</p>.<p><strong>ಆಗಿದ್ದೇನು?:</strong></p>.<p>ಗಾಂಧಿ ಭಾರತ ಕಾರ್ಯಕ್ರಮದ ಮುಖ್ಯ ವೇದಿಕೆ ಹಾಗೂ ಕೆಲವು ವೃತ್ತಗಳಲ್ಲಿ ಶಾಸಕ ಆಸಿಫ್ ಸೇಠ್ ಅವರ ಬ್ಯಾನರುಗಳನ್ನು ಅಳವಡಿಸಲಾಗಿದ್ದು, ಭಾರತ ನಕ್ಷೆಯಲ್ಲಿ ಜಮ್ಮು–ಕಾಶ್ಮೀರದ ಕೆಲಭಾಗ ಬಿಟ್ಟುಹೋಗಿದೆ. ಶಾಸಕ ಅಭಯ ಪಾಟೀಲ ಸೇರಿದಂತೆ ಬಿಜೆಪಿಯ ಹಲವರು ನಾಯಕರೂ ಇದಕ್ಕೆ ಕಿಡಿ ಕಾರಿದ್ದಾರೆ.</p>.<p>‘ಕಾಂಗ್ರೆಸ್ಸಿಗರು 1947ರಲ್ಲಿ ದೇಶವನ್ನು ತುಂಡು ಮಾಡಿದರು. ಈಗ ತಮ್ಮ ಪಕ್ಷದ ಅಧಿವೇಶನ ಮಾಡಿ ಭಾರತದ ನಕ್ಷೆ ತುಂಡರಿಸಿ ಅವಮಾನ ಮಾಡಿದ್ದಾರೆ. ಅವರು ದೇಶದ ಕ್ಷಮೆ ಕೇಳಬೇಕು’ ಎಂದೂ ಅಭಯ ಪಾಟೀಲ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ‘ಬಿಜೆಪಿಯವರು ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ‘ಗಾಂಧಿ ಭಾರತ’ ಕಾರ್ಯಕ್ರಮದ ಯಶಸ್ಸು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರ ಹೊಟ್ಟೆಕಿಚ್ಚಿಗೆ ನಮ್ಮಲ್ಲಿ ಮದ್ದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.</p>.<p>‘ಕಾಂಗ್ರೆಸ್ನ ಕೆಲ ಬ್ಯಾನರುಗಳಲ್ಲಿ ಭಾರತದ ನಕ್ಷೆಯನ್ನು ತಿರುಚಿ ಅಪಮಾನ ಮಾಡಲಾಗಿದೆ’ ಎಂಬ ಬಿಜೆಪಿ ನಾಯಕರ ಆರೋಪಕ್ಕೆ, ನಗರದಲ್ಲಿ ಗುರುವಾರ ಅವರು ಪ್ರತಿಕ್ರಿಯೆ ನೀಡಿದರು.</p>.<p>‘ಮಾಹಿತಿ ಕೊರತೆಯಿಂದ ಕೆಲ ನಾಯಕರು ಗಮನಿಸದೇ ಹಾಗೆ ಮಾಡಿದ್ದಾರೆ. ಈಗಾಗಲೇ ಅಂಥ ಕಟೌಟು, ಬ್ಯಾನರುಗಳನ್ನು ತೆಗೆಸಿದ್ದೇವೆ. ಈ ಸಂಭ್ರಮದ ಮಧ್ಯೆ ಇಂಥವಕ್ಕೆ ದೊಡ್ಡ ಮಹತ್ವ ಕೊಡಬಾರದು’ ಎಂದರು.</p>.<p><strong>ಆಗಿದ್ದೇನು?:</strong></p>.<p>ಗಾಂಧಿ ಭಾರತ ಕಾರ್ಯಕ್ರಮದ ಮುಖ್ಯ ವೇದಿಕೆ ಹಾಗೂ ಕೆಲವು ವೃತ್ತಗಳಲ್ಲಿ ಶಾಸಕ ಆಸಿಫ್ ಸೇಠ್ ಅವರ ಬ್ಯಾನರುಗಳನ್ನು ಅಳವಡಿಸಲಾಗಿದ್ದು, ಭಾರತ ನಕ್ಷೆಯಲ್ಲಿ ಜಮ್ಮು–ಕಾಶ್ಮೀರದ ಕೆಲಭಾಗ ಬಿಟ್ಟುಹೋಗಿದೆ. ಶಾಸಕ ಅಭಯ ಪಾಟೀಲ ಸೇರಿದಂತೆ ಬಿಜೆಪಿಯ ಹಲವರು ನಾಯಕರೂ ಇದಕ್ಕೆ ಕಿಡಿ ಕಾರಿದ್ದಾರೆ.</p>.<p>‘ಕಾಂಗ್ರೆಸ್ಸಿಗರು 1947ರಲ್ಲಿ ದೇಶವನ್ನು ತುಂಡು ಮಾಡಿದರು. ಈಗ ತಮ್ಮ ಪಕ್ಷದ ಅಧಿವೇಶನ ಮಾಡಿ ಭಾರತದ ನಕ್ಷೆ ತುಂಡರಿಸಿ ಅವಮಾನ ಮಾಡಿದ್ದಾರೆ. ಅವರು ದೇಶದ ಕ್ಷಮೆ ಕೇಳಬೇಕು’ ಎಂದೂ ಅಭಯ ಪಾಟೀಲ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>